Kalasa live https://www.kalasalive.com/ news & views of Kalasa Fri, 05 Dec 2025 14:59:50 +0000 en-US hourly 1 https://wordpress.org/?v=6.8.3 https://www.kalasalive.com/wp-content/uploads/2022/04/cropped-kl-5-32x32.png Kalasa live https://www.kalasalive.com/ 32 32 ಕಳಸ ಪ್ರಬೋಧಿನಿ ವಿದ್ಯಾ ಕೇಂದ್ರದಲ್ಲಿ ‘ಚಿಣ್ಣರ ಹಬ್ಬ’ದ ಸಂಭ್ರಮ! – ಬ್ಯಾಗ್ ರಹಿತ ದಿನಕ್ಕೆ ವಿಶಿಷ್ಟ ಕಾಯಕಲ್ಪ https://www.kalasalive.com/?p=9382 https://www.kalasalive.com/?p=9382#respond Fri, 05 Dec 2025 14:59:50 +0000 https://www.kalasalive.com/?p=9382 ಕಳಸ ಲೈವ್ ವರದಿ ಕಳಸ ಪ್ರಬೋಧಿನಿ ವಿದ್ಯಾ ಕೇಂದ್ರದಲ್ಲಿ ಶುಕ್ರವಾರ ‘ಬ್ಯಾಗ್ ರಹಿತ ದಿನ’ ವನ್ನು “ಚಿಣ್ಣರ ಹಬ್ಬ” ಎಂಬ ವಿನೂತನ ಪರಿಕಲ್ಪನೆಯೊಂದಿಗೆ ಅರ್ಥಪೂರ್ಣವಾಗಿ

The post ಕಳಸ ಪ್ರಬೋಧಿನಿ ವಿದ್ಯಾ ಕೇಂದ್ರದಲ್ಲಿ ‘ಚಿಣ್ಣರ ಹಬ್ಬ’ದ ಸಂಭ್ರಮ! – ಬ್ಯಾಗ್ ರಹಿತ ದಿನಕ್ಕೆ ವಿಶಿಷ್ಟ ಕಾಯಕಲ್ಪ appeared first on Kalasa live.

]]>

ಕಳಸ ಲೈವ್ ವರದಿ
ಕಳಸ ಪ್ರಬೋಧಿನಿ ವಿದ್ಯಾ ಕೇಂದ್ರದಲ್ಲಿ ಶುಕ್ರವಾರ ‘ಬ್ಯಾಗ್ ರಹಿತ ದಿನ’ ವನ್ನು “ಚಿಣ್ಣರ ಹಬ್ಬ” ಎಂಬ ವಿನೂತನ ಪರಿಕಲ್ಪನೆಯೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು. ಶೈಕ್ಷಣಿಕ ಪಠ್ಯದ ಹೊರತಾದ ಜೀವನ ಕೌಶಲ್ಯ ಮತ್ತು ಕ್ರಿಯಾಶೀಲತೆಗೆ ಒತ್ತು ನೀಡಿದ ಈ ದಿನ ವಿದ್ಯಾರ್ಥಿಗಳಿಗೆ ಒಂದು ಅದ್ಭುತ ಅನುಭವ ನೀಡಿತು.


ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಶ್ರೀ ರಂಗನಾಥ್ ಚಿತ್ರವಳ್ಳಿಯವರು ವಿವಿಧ ವಿಭಾಗಗಳಲ್ಲಿ ಮಕ್ಕಳಿಗೆ ಹಲವು ಆಕರ್ಷಕ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು. ಅವರ ಮಾರ್ಗದರ್ಶನದಲ್ಲಿ ಮಕ್ಕಳು ಕ್ರಿಯಾಶೀಲರಾಗಿ ಕಲಿಕೆಯಲ್ಲಿ ಭಾಗವಹಿಸಿ, ಬ್ಯಾಗ್ ರಹಿತ ದಿನವನ್ನು ಯಶಸ್ವಿಯಾಗಿ ನಿರ್ವಹಿಸಿದರು.


ತರಗತಿವಾರು ಶಿಕ್ಷಕರು ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಕರಕುಶಲ ಮತ್ತು ಪ್ರಾಯೋಗಿಕ ಕೆಲಸಗಳನ್ನು ಹೇಳಿಕೊಡುವ ಮೂಲಕ ಈ ದಿನವನ್ನು ಆಕರ್ಷಕವಾಗಿ ಮೂಡಿಸಿದರು. ಮಕ್ಕಳಲ್ಲಿ ಸ್ವಾವಲಂಬನೆ ಮತ್ತು ಪರಿಸರ ಪ್ರಜ್ಞೆ ಮೂಡಿಸುವ ದೃಷ್ಟಿಯಿಂದ ಬಟ್ಟೆಗೆ ಗುಂಡಿ ಹಾಕುವುದು ಹಾಗೂ ಸರಳ ಹೊಲಿಗೆ ಕಲಿಕೆ.ಮಕ್ಕಳು ಇಂಧನ ಬಳಸದೆ ಸುಲಭವಾಗಿ ತಯಾರಿಸಬಹುದಾದ ಪೌಷ್ಟಿಕ ಆಹಾರ ಪದಾರ್ಥಗಳನ್ನು ತಯಾರಿಸುವುದನ್ನು ಕಲಿತರು.


ಪ್ಲಾಸ್ಟಿಕ್ ಬಳಕೆಗೆ ಪರ್ಯಾಯವಾಗಿ ಪೇಪರ್ ಬ್ಯಾಗ್ ತಯಾರಿಸುವ ಕೌಶಲ್ಯ. ವಿವಿಧ ರೀತಿಯ ಹೂಗಳನ್ನು ಬಳಸಿ ಮಾಲೆ ಕಟ್ಟುವುದು.ಈ ರೀತಿಯ ಸೃಜನಾತ್ಮಕ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಕೇವಲ ಕೌಶಲ್ಯಗಳನ್ನು ಮಾತ್ರವಲ್ಲದೆ, ಸಹಕಾರ ಮನೋಭಾವ ಮತ್ತು ಪ್ರಾಯೋಗಿಕ ಜ್ಞಾನವನ್ನೂ ಬೆಳೆಸಲು ಸಹಕಾರಿಯಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷರಾದ ಟಿ. ವಿ ವೆಂಕಟಸುಬ್ಬಯ್ಯ ಹಾಗೂ ಉಪಾಧ್ಯಕ್ಷರಾದ ಶಿಗಜೇಂದ್ರ ಗೋರಸುಕುಡಿಗೆ ಅವರು ಉಪಸ್ಥಿತರಿದ್ದು, ಮಕ್ಕಳ ಚಟುವಟಿಕೆಗಳನ್ನು ವೀಕ್ಷಿಸಿ ಅವರನ್ನು ಪ್ರೋತ್ಸಾಹಿಸಿದರು. ಶಾಲಾ ಆಡಳಿತ ಮಂಡಳಿಯ ಇತರ ಸದಸ್ಯರು ಕೂಡಾ ಈ ವಿಶೇಷ ದಿನದ ಯಶಸ್ವಿಗೆ ಸಾಕ್ಷಿಯಾದರು.
ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದದವರ ದೂರದೃಷ್ಟಿಯ ಯೋಜನೆ ಹಾಗೂ ಶ್ರೀ ರಂಗನಾಥ್ ಅವರ ಮಾರ್ಗದರ್ಶನದಿಂದಾಗಿ ‘ಚಿಣ್ಣರ ಹಬ್ಬ’ವು ಪ್ರಬೋಧಿನಿ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳಿಗೆ ಒಂದು ಸ್ಮರಣೀಯ ಮತ್ತು ಕ್ರಿಯಾತ್ಮಕ ದಿನವಾಯಿತು.

The post ಕಳಸ ಪ್ರಬೋಧಿನಿ ವಿದ್ಯಾ ಕೇಂದ್ರದಲ್ಲಿ ‘ಚಿಣ್ಣರ ಹಬ್ಬ’ದ ಸಂಭ್ರಮ! – ಬ್ಯಾಗ್ ರಹಿತ ದಿನಕ್ಕೆ ವಿಶಿಷ್ಟ ಕಾಯಕಲ್ಪ appeared first on Kalasa live.

]]>
https://www.kalasalive.com/?feed=rss2&p=9382 0
ಕಳಸ ಚಾಲಕನ ನಿಯಂತ್ರಣ ತಪ್ಪಿದ ಖಾಸಾಗಿ ಬಸ್ಸು ಚರಂಡಿಗೆ https://www.kalasalive.com/?p=9379 https://www.kalasalive.com/?p=9379#respond Fri, 05 Dec 2025 05:22:16 +0000 https://www.kalasalive.com/?p=9379 ಕಳಸ ಲೈವ್ ವರದಿ ಕಳಸ-ಮಂಗಳೂರು ಗೆ ತೆರಳುತ್ತಿದ್ದ ಖಾಸಾಗಿ ಬಸ್ಸು ಕಳಸ ಸಮೀಪದ ಶ್ರೀ ರಾಮ ಬಳಿ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಇಳಿದಿದೆ.

The post ಕಳಸ ಚಾಲಕನ ನಿಯಂತ್ರಣ ತಪ್ಪಿದ ಖಾಸಾಗಿ ಬಸ್ಸು ಚರಂಡಿಗೆ appeared first on Kalasa live.

]]>
ಕಳಸ ಲೈವ್ ವರದಿ
ಕಳಸ-ಮಂಗಳೂರು ಗೆ ತೆರಳುತ್ತಿದ್ದ ಖಾಸಾಗಿ ಬಸ್ಸು ಕಳಸ ಸಮೀಪದ ಶ್ರೀ ರಾಮ ಬಳಿ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಇಳಿದಿದೆ.
ಕಳಸದಿಂದ 8.45ಕ್ಕೆ ಹೊರಡುತ್ತಿದ್ದ ಈ ಬಸ್ಸು ಕೆಲ ವರ್ಷಗಳಿಂದ ಸ್ಥಗಿತಗೊಂಡಿತ್ತು. ಆದರೆ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಮತ್ತೆ ಆರಂಭಗೊAಡಿತ್ತು. ಈ ಸಮಯಕ್ಕೆ ಹೊರಡುವ ಬಸ್ಸು ಸಂಸೆ ಐಟಿಐ ಹೋಗುವ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೂ ಸಾಕಷ್ಟು ಅನುಕೂಲವಾಗುತ್ತಿತ್ತು.
ಇಂದು ನಡೆದ ಘಟನೆಯ ಸಂದರ್ಭದಲ್ಲೂ ಹೆಚ್ಚಾಗಿ ವಿದ್ಯಾರ್ಥಿಗಳೇ ಬಸ್ಸಿನಲ್ಲಿ ಸಂಚಾರ ಮಾಡುತ್ತಿದ್ದರು. ಅದೃಷ್ಟವಶಾತ್ ಯಾರಿಗೂ ಹಾನಿಯಾಗಲಿಲ್ಲ.

The post ಕಳಸ ಚಾಲಕನ ನಿಯಂತ್ರಣ ತಪ್ಪಿದ ಖಾಸಾಗಿ ಬಸ್ಸು ಚರಂಡಿಗೆ appeared first on Kalasa live.

]]>
https://www.kalasalive.com/?feed=rss2&p=9379 0
ರೈತರಿಗೆ ಹವಾಮಾನಾಧಾರಿತ ಬೆಳೆ ವಿಮೆ ಸಂಕಷ್ಟ: ಸಂಸದ ಶ್ರೀನಿವಾಸ ಪೂಜಾರಿಯವರಿಂದ ಕೇಂದ್ರ ಕೃಷಿ ಸಚಿವರಿಗೆ ಮನವಿ https://www.kalasalive.com/?p=9376 https://www.kalasalive.com/?p=9376#respond Thu, 04 Dec 2025 12:57:34 +0000 https://www.kalasalive.com/?p=9376 ಕಳಸ ಲೈವ್ ವರದಿ ಕರ್ನಾಟಕದಲ್ಲಿ ಹವಾಮಾನಾಧಾರಿತ ಬೆಳೆ ವಿಮೆ ಯೋಜನೆಗೆ ಸಂಬAಧಿಸಿದ ಗಂಭೀರ ಅಸಮರ್ಪಕತೆಗಳ ಪರಿಣಾಮವಾಗಿ ರೈತರು ಸಂಕಷ್ಟದಲ್ಲಿರುವ ವಿಷಯವನ್ನು ಉಡುಪಿ–ಚಿಕ್ಕಮಗಳೂರು ಲೋಕಸಭಾ ಸದಸ್ಯ

The post ರೈತರಿಗೆ ಹವಾಮಾನಾಧಾರಿತ ಬೆಳೆ ವಿಮೆ ಸಂಕಷ್ಟ: ಸಂಸದ ಶ್ರೀನಿವಾಸ ಪೂಜಾರಿಯವರಿಂದ ಕೇಂದ್ರ ಕೃಷಿ ಸಚಿವರಿಗೆ ಮನವಿ appeared first on Kalasa live.

]]>
ಕಳಸ ಲೈವ್ ವರದಿ
ಕರ್ನಾಟಕದಲ್ಲಿ ಹವಾಮಾನಾಧಾರಿತ ಬೆಳೆ ವಿಮೆ ಯೋಜನೆಗೆ ಸಂಬAಧಿಸಿದ ಗಂಭೀರ ಅಸಮರ್ಪಕತೆಗಳ ಪರಿಣಾಮವಾಗಿ ರೈತರು ಸಂಕಷ್ಟದಲ್ಲಿರುವ ವಿಷಯವನ್ನು ಉಡುಪಿ–ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರ ಗಮನಕ್ಕೆ ತಂದಿದ್ದಾರೆ. ವಿಮಾ ಕಂಪನಿಗಳ ತಾರತಮ್ಯ, ಮಟ್ಟದ ತಪ್ಪು ದಾಖಲೆಗಳು ಮತ್ತು ಪರಿಹಾರ ಮಂಜೂರಾತಿಯಲ್ಲಿನ ಅನ್ಯಾಯದಿಂದ ಬೆಳೆ ನಷ್ಟ ಅನುಭವಿಸಿದ ಸಾವಿರಾರು ರೈತರು ಪರಿಹಾರಕ್ಕಾಗಿ ನಿರೀಕ್ಷಿಸುತ್ತಿರುವ ವಿಷಯ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಮಳೆ ಮಾಪಕಗಳನ್ನು ಅಳವಡಿಸಿರುವುದಿದ್ದರೂ, ಅವುಗಳ ಅಸಮರ್ಪಕ ನಿರ್ವಹಣೆಯಿಂದ ಮಳೆಯ ಪ್ರಮಾಣ ಸರಿಯಾಗಿ ದಾಖಲಾಗದೇ, ರೈತರು ವಿಮೆ ಪಡೆಯುವ ಹಕ್ಕನ್ನು ಕಳೆದುಕೊಂಡಿರುವ ಬಗ್ಗೆ ಸಂಸದ ಕೋಟ ಗಮನ ಹರಿಸಿದರು. ಸರಿಯಾದ ದಾಖಲೆಗಳಿಲ್ಲದ ಕಾರಣ ಹಲವಾರು ಪ್ರದೇಶಗಳಲ್ಲಿ ನಷ್ಟವಾಗಿದ್ದರೂ ‘ಬೆಳೆ ನಷ್ಟ ಇಲ್ಲ’ ಎಂಬ ಆಕ್ಷೇಪಾರ್ಹ ವರದಿಗಳು ಸಿದ್ಧವಾಗಿವೆ ಎಂದು ಅವರು ವಿಚಾರ ಮಂಡಿಸಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ 39,507 ಮಂದಿ ರೈತರು ವಿಮಾ ಪ್ರೀಮಿಯಂ ಪಾವತಿಸಿದ್ದರೂ, ಕೇವಲ 9,000 ಮಂದಿಗಷ್ಟೇ ಪರಿಹಾರ ಮಂಜೂರಾಗಿ, ನೀಡಲಾದ ಮೊತ್ತವೂ ಅತ್ಯಂತ ಕಡಿಮೆಯಾಗಿದೆ. ಕೆಲವರ ಖಾತೆಗೆ ಬಂದ ಪರಿಹಾರವು ಅವರು ಕಟ್ಟಿದ ವಿಮಾ ಪ್ರೀಮಿಯಂಗಿAತಲೂ ಕಡಿಮೆಯಾಗಿದೆ ಎಂಬುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಅನ್ಯಾಯದ ವಿರುದ್ಧ ಜಿಲ್ಲೆದೆಲ್ಲೆಡೆ ರೈತರು ಪ್ರತಿಭಟನೆಯ ಮಾರ್ಗ ಹಿಡಿದಿದ್ದು, ವಿಮಾ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ವ್ಯಕ್ತವಾಗಿದೆ. ವಿಷಯ ಗಂಭೀರತೆ ಮನಗಂಡ ಸಂಸದ ಕೋಟ, ಕೇಂದ್ರ ಸರ್ಕಾರ ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳಿಂದ ತುರ್ತು ವರದಿ ಪಡೆದು ವಿಮಾ ವಂಚಿತ ರೈತರಿಗೆ ಪೂರ್ಣ ಪ್ರಮಾಣದ ಪರಿಹಾರ ನೀಡುವಂತೆ ಮನವಿ ಸಲ್ಲಿಸಿದರು.
ಮನವಿಯನ್ನು ಸ್ವೀಕರಿಸಿದ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಕ್ಷಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿರುವುದಾಗಿ ಸಂಸದರು ತಿಳಿಸಿದ್ದಾರೆ.

The post ರೈತರಿಗೆ ಹವಾಮಾನಾಧಾರಿತ ಬೆಳೆ ವಿಮೆ ಸಂಕಷ್ಟ: ಸಂಸದ ಶ್ರೀನಿವಾಸ ಪೂಜಾರಿಯವರಿಂದ ಕೇಂದ್ರ ಕೃಷಿ ಸಚಿವರಿಗೆ ಮನವಿ appeared first on Kalasa live.

]]>
https://www.kalasalive.com/?feed=rss2&p=9376 0
ಅಡಿಕೆ, ಕಾಳುಮೆಣಸು, ಕಾಫಿ ಬೆಳೆಗಾರರಿಗೆ ವಿಚಾರ ಸಂಕಿರಣ https://www.kalasalive.com/?p=9373 https://www.kalasalive.com/?p=9373#respond Thu, 04 Dec 2025 09:34:57 +0000 https://www.kalasalive.com/?p=9373 ಕಳಸ ಲೈವ್ ವರದಿ ಅಡಿಕೆ, ಕಾಳುಮೆಣಸು ಮತ್ತು ಕಾಫಿ ಬೆಳೆಗಳಲ್ಲಿನ ರೋಗ ನಿಯಂತ್ರಣ ಮತ್ತು ಸಮಗ್ರ ಪೋಷಕಾಂಶಗಳ ನಿರ್ವಹಣೆ ಕುರಿತು ರೈತರಿಗೆ ಉಪಯುಕ್ತವಾಗುವ “ವಿಚಾರ

The post ಅಡಿಕೆ, ಕಾಳುಮೆಣಸು, ಕಾಫಿ ಬೆಳೆಗಾರರಿಗೆ ವಿಚಾರ ಸಂಕಿರಣ appeared first on Kalasa live.

]]>
ಕಳಸ ಲೈವ್ ವರದಿ
ಅಡಿಕೆ, ಕಾಳುಮೆಣಸು ಮತ್ತು ಕಾಫಿ ಬೆಳೆಗಳಲ್ಲಿನ ರೋಗ ನಿಯಂತ್ರಣ ಮತ್ತು ಸಮಗ್ರ ಪೋಷಕಾಂಶಗಳ ನಿರ್ವಹಣೆ ಕುರಿತು ರೈತರಿಗೆ ಉಪಯುಕ್ತವಾಗುವ “ವಿಚಾರ ಸಂಕಿರಣ” ವನ್ನು ಕಳಸದಲ್ಲಿ ಆಯೋಜಿಸಲಾಗಿದೆ.
ಬಾಯರ್ ಕ್ರಾಪ್ ಸೈನ್ಸ್ ಲಿಮಿಟೆಡ್ ಮತ್ತು ಶ್ರೀ ಚನ್ನಕೇಶವ ಅಗ್ರೋ ಸರ್ವಿಸಸ್, ಕಳಸ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ 6-12-2025ರಂದು ಸಂಜೆ 5-30ಕ್ಕೆ ಪಟ್ಟಣದ ರೋಟರಿ ಭವನದಲ್ಲಿ ಈ ಕಾರ್ಯಕ್ರಮವು ನಡೆಯಲಿದೆ.
ಈ ವಿಚಾರ ಸಂಕಿರಣದಲ್ಲಿ ಅಡಿಕೆ, ಕಾಳುಮೆಣಸು, ಮತ್ತು ಕಾಫಿ ಬೆಳೆಗಳಲ್ಲಿ ರೋಗ ನಿಯಂತ್ರಣ ಮತ್ತು ಸಮಗ್ರ ಪೋಷಕಾಂಶಗಳ ನಿರ್ವಹಣೆ ಕುರಿತು ತಜ್ಞರು ಮಾಹಿತಿ ನೀಡಲಿದ್ದಾರೆ.
ಈ ಭಾಗದ ಅಡಿಕೆ, ಕಾಳುಮೆಣಸು ಮತ್ತು ಕಾಫಿ ಬೆಳೆಗಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ತಮ್ಮ ಬೆಳೆಗಳಿಗೆ ಸಂಬAಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವAತೆ ಮತ್ತು ತಜ್ಞರಿಂದ ಹೆಚ್ಚಿನ ಮಾಹಿತಿ ಪಡೆಯುವಂತೆ ಆಯೋಜಕರು ಕೋರಿದ್ದಾರೆ.

The post ಅಡಿಕೆ, ಕಾಳುಮೆಣಸು, ಕಾಫಿ ಬೆಳೆಗಾರರಿಗೆ ವಿಚಾರ ಸಂಕಿರಣ appeared first on Kalasa live.

]]>
https://www.kalasalive.com/?feed=rss2&p=9373 0
ಕಳಸ ವೆಂಕಟರಮಣ ದೇವಸ್ಥಾನದಲ್ಲಿ ಮುಕ್ಕೋಟಿ ದ್ವಾದಶಿ ಆಚರಣೆ https://www.kalasalive.com/?p=9368 https://www.kalasalive.com/?p=9368#respond Tue, 02 Dec 2025 15:51:26 +0000 https://www.kalasalive.com/?p=9368 ಕಳಸ ಲೈವ್ ವರದಿ ಕಳಸ ವೆಂಕಟರಮಣ ದೇವಸ್ಥಾನದಲ್ಲಿ ಮಂಗಳವಾರ ಪವಿತ್ರವಾದ ಮುಕ್ಕೋಟಿ ದ್ವಾದಶಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. 33 ಕೋಟಿ ದೇವತೆಗಳು ವೈಕುಂಠದ ಉತ್ತರ ದ್ವಾರದಿಂದ

The post ಕಳಸ ವೆಂಕಟರಮಣ ದೇವಸ್ಥಾನದಲ್ಲಿ ಮುಕ್ಕೋಟಿ ದ್ವಾದಶಿ ಆಚರಣೆ appeared first on Kalasa live.

]]>

ಕಳಸ ಲೈವ್ ವರದಿ
ಕಳಸ ವೆಂಕಟರಮಣ ದೇವಸ್ಥಾನದಲ್ಲಿ ಮಂಗಳವಾರ ಪವಿತ್ರವಾದ ಮುಕ್ಕೋಟಿ ದ್ವಾದಶಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
33 ಕೋಟಿ ದೇವತೆಗಳು ವೈಕುಂಠದ ಉತ್ತರ ದ್ವಾರದಿಂದ ಮಹಾವಿಷ್ಣುವಿನ ದರ್ಶನ ಪಡೆಯುತ್ತಾರೆ ಎಂಬ ಪುರಾಣೋಕ್ತಿ ಹಿನ್ನೆಲೆಯಲ್ಲಿ, ದೇವಾಲಯದ ದ್ವಾರವನ್ನು ಬೆಳಗಿನ ಜಾವವೇ ವಿಶೇಷವಾಗಿ ತೆರೆಯಲಾಯಿತು. ಭಕ್ತರು ದೀರ್ಘ ಸಾಲಿನಲ್ಲಿ ನಿಂತು ದ್ವಾರ ದರ್ಶನ’ ಪಡೆದರು.
ಬೆಳಗ್ಗೆ ದೇವಾಲಯದಲ್ಲಿ ವೇದಘೋಷ, ಮಂಗಳವಾಧ್ಯ ಮಧ್ಯೆ ಶ್ರೀ ವೆಂಕಟರಮಣಸ್ವಾಮಿಯ ಪಲ್ಲಕ್ಕಿ ಉತ್ಸವವು ವಿಜೃಂಭಣೆಯಿAದ ಆರಂಭವಾಗಿ, ರುದ್ರಪಾದಕ್ಕೆ ಸಾಗಿತು. ಅಲ್ಲಿ ಶ್ರೀಸ್ವಾಮಿಗೆ ವೈದಿಕ ಸಂಪ್ರದಾಯದAತೆ ಅಭಿಷೇಕ ನೆರವೇರಿತು. ನಂತರ ಕಟ್ಟೆಪೂಜೆ ನೆರವೇರಿತು. ದೇವಸ್ಥಾನದ ಪರಿವಾರ ಮತ್ತು ಭಕ್ತ ಸಮುದಾಯದ ಸಹಭಾಗಿತ್ವದಲ್ಲಿ ಉಪಹಾರ ಸೇವೆಯೊಂದಿಗೆ ಮಹಾಪೂಜೆ ನಡೆಯಿತು.
ಸಂಜೆ ವೇಳೆಗೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ಪೇಟೆ ಉತ್ಸವ ನಡೆಯಿತು.ಅಲಂಕೃತ ಪಲ್ಲಕ್ಕಿಯಲ್ಲಿ ಶ್ರೀ ವೆಂಕಟರಮಣಸ್ವಾಮಿಯ ಭವ್ಯ ಮೆರವಣಿಗೆಯು ಭಕ್ತರನ್ನು ಆಕರ್ಷಿಸಿತು.

The post ಕಳಸ ವೆಂಕಟರಮಣ ದೇವಸ್ಥಾನದಲ್ಲಿ ಮುಕ್ಕೋಟಿ ದ್ವಾದಶಿ ಆಚರಣೆ appeared first on Kalasa live.

]]>
https://www.kalasalive.com/?feed=rss2&p=9368 0
ಹೊರನಾಡು ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ https://www.kalasalive.com/?p=9358 https://www.kalasalive.com/?p=9358#respond Tue, 02 Dec 2025 04:39:56 +0000 https://www.kalasalive.com/?p=9358 ಕಳಸ ಲೈವ್ ವರದಿ ಕಳಸ ತಾಲ್ಲೂಕಿನ ಹೊರನಾಡು ಗ್ರಾಮ ಪಂಚಾಯಿತಿ ೨೦೨೩-೨೪ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ. ಬೆಂಗಳೂರಿನಲ್ಲಿ ವಿಧಾನಸೌದದ ಬ್ಯಾಂಕ್ವೇಟ್ ಹಾಲ್‌ನಲ್ಲಿ

The post ಹೊರನಾಡು ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ appeared first on Kalasa live.

]]>
ಕಳಸ ಲೈವ್ ವರದಿ
ಕಳಸ ತಾಲ್ಲೂಕಿನ ಹೊರನಾಡು ಗ್ರಾಮ ಪಂಚಾಯಿತಿ ೨೦೨೩-೨೪ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ.
ಬೆಂಗಳೂರಿನಲ್ಲಿ ವಿಧಾನಸೌದದ ಬ್ಯಾಂಕ್ವೇಟ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಗ್ರಾಮಪಂಚಾಯಿತಿ ಅಧ್ಯಕ್ಷ ಮಧು ಪ್ರಸಾದ್ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರುಣ್ ಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿ ಪ್ರಮಾಣಪತ್ರ, ಸ್ಮರಣಿಕೆ ಹಾಗೂ ೫ ಲಕ್ಷ ರೂ ಪ್ರೋತ್ಸಾಹಧನವನ್ನು ನೀಡಿ ಗೌರವಿಸಲಾಗಿದೆ.

The post ಹೊರನಾಡು ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ appeared first on Kalasa live.

]]>
https://www.kalasalive.com/?feed=rss2&p=9358 0
ಕಳಸ ಸೋಸೈಟಿಯ ಸ್ನೇಹಮೂರ್ತಿ ರವಿ ಗೌಡ್ರಿಗೆ ಬೀಳ್ಕೊಡುಗೆ” https://www.kalasalive.com/?p=9356 https://www.kalasalive.com/?p=9356#respond Mon, 01 Dec 2025 13:16:13 +0000 https://www.kalasalive.com/?p=9356 ಕಳಸ ಲೈವ್ ವರದಿ ಕಳಸ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಳೆದ ೩೪ ವರ್ಷಗಳ ಕಾಲ ಮಾರಾಟ ಗುಮಾಸ್ತರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದ

The post ಕಳಸ ಸೋಸೈಟಿಯ ಸ್ನೇಹಮೂರ್ತಿ ರವಿ ಗೌಡ್ರಿಗೆ ಬೀಳ್ಕೊಡುಗೆ” appeared first on Kalasa live.

]]>

ಕಳಸ ಲೈವ್ ವರದಿ
ಕಳಸ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಳೆದ ೩೪ ವರ್ಷಗಳ ಕಾಲ ಮಾರಾಟ ಗುಮಾಸ್ತರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದ ರವಿರಾಜ್ (ರವಿ ಗೌಡ್ರು) ಅವರು ನವೆಂಬರ್ ೩೦ ರಂದು ವಯೋ ಸಹಜ ನಿವೃತ್ತಿ ಪಡೆದಿದ್ದು, ಸಂಘದ ವತಿಯಿಂದ ಅವರಿಗೆ ಸರಳ ಹಾಗೂ ಭಾವನಾತ್ಮಕ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಕಳಸ ಭಾಗದ ಜನತೆಗೆ ಕೇವಲ ಗುಮಾಸ್ತರಾಗಿರದೇ ಸೊಸೈಟಿ ರವಿ ಗೌಡ್ರು ಎಂದೇ ಪ್ರೀತಿಯಿಂದ ನೆನಪಿಸಿಕೊಳ್ಳುವಷ್ಟು ಚಿರಪರಿಚಿತರಾಗಿದ್ದ ರವಿರಾಜ್ ಅವರು, ಗ್ರಾಮೀಣ ಪ್ರದೇಶದ ಜನಸಾಮಾನ್ಯರೊಂದಿಗೆ ಅತ್ಯುತ್ತಮ ಬಾಂಧವ್ಯವನ್ನು ಇಟ್ಟುಕೊಂಡು, ಯಾರೊಂದಿಗೂ ನಿಷ್ಟೂರ ಮಾಡಿಕೊಳ್ಳದೆ, ಗ್ರಾಹಕರಿಗೆ ಉತ್ತಮವಾದ ಸೇವೆಯನ್ನು ನೀಡಿ ತಮ್ಮ ಸುದೀರ್ಘ ಸೇವೆಯನ್ನು ಪೂರ್ಣಗೊಳಿಸಿದ್ದಾರೆ.
ನಿವೃತ್ತಿ ಸಂದರ್ಭದಲ್ಲಿ ನಡೆದ ಸರಳ ಬೀಳ್ಕೊಡುಗೆ ಸಮಾರಂಭದಲ್ಲಿ ಸಂಘದ ಅಧ್ಯಕ್ಷರಾದ ಜಿ.ಕೆ. ಮಂಜಪ್ಪಯ್ಯ ಅವರು ಮಾತನಾಡಿ, “ಕಳೆದ ೩೪ ವರ್ಷಗಳಲ್ಲಿ ರವಿರಾಜ್ ಅವರು ತಮ್ಮ ಕರ್ತವ್ಯದಲ್ಲಿ ಯಾವುದೇ ಒಂದು ಕಪ್ಪು ಚುಕ್ಕೆ ಬಾರದಂತೆ ಕೆಲಸ ಮಾಡಿದ್ದಾರೆ. ಅವರ ಈ ಕರ್ತವ್ಯ ನಿಷ್ಠೆ ಮತ್ತು ನಿಸ್ವಾರ್ಥ ಸೇವೆ ಯುವ ಪೀಳಿಗೆಗೆ ಮತ್ತು ಸಂಘದ ಸಿಬ್ಬಂದಿಗೆ ನಿಜವಾದ ಮಾದರಿಯಾಗಿದೆ. ನಿವೃತ್ತಿ ಅನಿವಾರ್ಯವಾದರೂ, ಇವರ ಮುಂದಿನ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹೇಳಿದರು.
ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ನಿವೃತ್ತ ರವಿ ಗೌಡ್ರು ಈ ಸಂಸ್ಥೆಯಲ್ಲಿ ಕೆಲಸ ಮಾಡಲು ಅವಕಾಶ ನೀಡಿದ ಎಲ್ಲರಿಗೂ ವಂದನೆಗಳು. ವಿಶೇಷವಾಗಿ, ಸೊಸೈಟಿಗೆ ಬರುವ ಗ್ರಾಹಕರೆಲ್ಲರೂ ನನ್ನೊಂದಿಗೆ ಯಾವಾಗಲೂ ಒಳ್ಳೆಯ ರೀತಿಯಲ್ಲಿ ಸಹಕಾರ ನೀಡಿದ್ದಾರೆ. ನನ್ನೊಂದಿಗೆ ಯಾರೂ ಕೂಡ ದುಡುಕು ಮಾತನಾಡದೆ ಉತ್ತಮವಾಗಿ ಸ್ಪಂದಿಸಿದ್ದಾರೆ. ನಿಮ್ಮೆಲ್ಲರ ಪ್ರೀತಿಗೆ ಮತ್ತು ಸಹಕಾರಕ್ಕೆ ನಾನು ಸದಾ ಆಭಾರಿಯಾಗಿದ್ದೇನೆ” ಎಂದು ಭಾವನಾತ್ಮಕವಾಗಿ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ಸಂಘದ ಸಿಬ್ಬಂದಿ, ಆಡಳಿತ ಮಂಡಳಿ ಸದಸ್ಯರು ಮತ್ತು ಸ್ಥಳೀಯ ಹಿರಿಯ ಗ್ರಾಹಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ರವಿರಾಜ್ ಅವರಿಗೆ ಶುಭ ಕೋರಿದರು.
ಈ ಬೀಳ್ಕೊಡುಗೆ ಕಳಸ ಭಾಗದಲ್ಲಿ ೩ ದಶಕಗಳ ಕಾಲ ನಡೆದ ಒಂದು ಪ್ರಾಮಾಣಿಕ ಸಂಬAಧದ ಮುಕ್ತಾಯ ಮತ್ತು ಹೊಸ ಜೀವನದ ಆರಂಭದ ಸೂಚಕವಾಗಿತ್ತು.

The post ಕಳಸ ಸೋಸೈಟಿಯ ಸ್ನೇಹಮೂರ್ತಿ ರವಿ ಗೌಡ್ರಿಗೆ ಬೀಳ್ಕೊಡುಗೆ” appeared first on Kalasa live.

]]>
https://www.kalasalive.com/?feed=rss2&p=9356 0
ಕಳಸ ವೆಂಕಟರಮಣ ದೇವಸ್ಥಾನದಲ್ಲಿ ಮುಕ್ಕೋಟಿ ದ್ವಾದಶಿ: ನಾಳೆ ದೇವಸ್ಥಾನದಲ್ಲಿ ವಿಶೇಷ ಆಚರಣೆ https://www.kalasalive.com/?p=9337 https://www.kalasalive.com/?p=9337#respond Mon, 01 Dec 2025 06:44:17 +0000 https://www.kalasalive.com/?p=9337 ಕಳಸ ಲೈವ್ ವರದಿ ಕಳಸ ವೆಂಕಟರಮಣ ದೇವಸ್ಥಾನದಲ್ಲಿ ಡಿಸೆಂಬರ್ 2 ರಂದು ಪವಿತ್ರವಾದ “ಮುಕ್ಕೋಟಿ ದ್ವಾದಶಿ” ಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುವುದು. ಈ ವಿಶೇಷ ದಿನದಂದು

The post ಕಳಸ ವೆಂಕಟರಮಣ ದೇವಸ್ಥಾನದಲ್ಲಿ ಮುಕ್ಕೋಟಿ ದ್ವಾದಶಿ: ನಾಳೆ ದೇವಸ್ಥಾನದಲ್ಲಿ ವಿಶೇಷ ಆಚರಣೆ appeared first on Kalasa live.

]]>
ಕಳಸ ಲೈವ್ ವರದಿ
ಕಳಸ ವೆಂಕಟರಮಣ ದೇವಸ್ಥಾನದಲ್ಲಿ ಡಿಸೆಂಬರ್ 2 ರಂದು ಪವಿತ್ರವಾದ “ಮುಕ್ಕೋಟಿ ದ್ವಾದಶಿ” ಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುವುದು. ಈ ವಿಶೇಷ ದಿನದಂದು ದೇವರಿಗೆ ವಿವಿಧ ಧಾರ್ಮಿಕ ಮತ್ತು ಪೌರಾಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಪ್ರಾತಃಕಾಲ (ಬೆಳಿಗ್ಗೆ 6:00 ಗಂಟೆಗೆ): ಮುಕ್ಕೋಟಿ ದ್ವಾದಶಿ ಅಂಗವಾಗಿ ದೇವರು ರುದ್ರತೀರ್ಥಕ್ಕೆ ವಿಜಯಂಗೈಯಲಿದ್ದಾರೆ. ತದನಂತರ ದೇವರು ರುದ್ರತೀರ್ಥದಿಂದ ಹಿಂದಿರುಗಿದ ಬಳಿಕ ಕಟ್ಟೇಪೂಜೆ ನೆರವೇರಲಿದೆ. ಬಳಿಕ ಮಂಗಳಾರತಿ ಮತ್ತು ಭಕ್ತಾದಿಗಳಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿದೆ.
ರಾತ್ರಿ 8 ಗಂಟೆಗೆ ಪೇಟೆ ಉತ್ಸವವು ವಿಜೃಂಭಣೆಯಿAದ ನಡೆಯಲಿದೆ. ತದನಂತರ ಪೇಟೆ ಉತ್ಸವದ ಬಳಿಕ ಅಷ್ಟಾವಾದನ ಸೇವೆಯೊಂದಿಗೆ ಭಗವಂತನಿಗೆ ಮಹಾಪೂಜೆ ನೆರವೇರಲಿದೆ.
ಈ ಎಲ್ಲಾ ಧಾರ್ಮಿಕ ಕೈಂಕರ್ಯಗಳ ಸೇವಾಕಾರ್ಯವನ್ನು ಪಿ. ಪದ್ಮನಾಭ ಭಟ್ಟ ಮತ್ತು ಸಹೋದರರು ಸಮರ್ಪಿಸುತ್ತಿದ್ದಾರೆ.
ಆದ್ದರಿಂದ, ಎಲ್ಲಾ ಭಕ್ತಾದಿಗಳು ಈ ಪವಿತ್ರ ಮುಕ್ಕೋಟಿ ದ್ವಾದಶಿಯಂದು ನಡೆಯುವ ವಿಶೇಷ ಪೂಜೆ ಮತ್ತು ಉತ್ಸವಗಳಲ್ಲಿ ಭಾಗವಹಿಸಿ, ದೇವರ ಕೃಪೆಗೆ ಪಾತ್ರರಾಗಬೇಕೆಂದು ಜಿ.ಎಸ್.ಬಿ ಸಮಾಜ ಕೇಳಿಕೊಂಡಿದೆ.

The post ಕಳಸ ವೆಂಕಟರಮಣ ದೇವಸ್ಥಾನದಲ್ಲಿ ಮುಕ್ಕೋಟಿ ದ್ವಾದಶಿ: ನಾಳೆ ದೇವಸ್ಥಾನದಲ್ಲಿ ವಿಶೇಷ ಆಚರಣೆ appeared first on Kalasa live.

]]>
https://www.kalasalive.com/?feed=rss2&p=9337 0
ಕಳಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೋಟರಾಕ್ಟ್ ಕ್ಲಬ್ ಅಧ್ಯಕ್ಷೆಯಾಗಿ ಇಂಚರ ವಿ.ಎಂ ಪ್ರಮಾಣ ವಚನ ಸ್ವೀಕಾರ https://www.kalasalive.com/?p=9328 https://www.kalasalive.com/?p=9328#respond Sun, 30 Nov 2025 06:59:54 +0000 https://www.kalasalive.com/?p=9328 ಕಳಸ ಲೈವ್ ವರದಿ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳಸ ರೋಟರಿ ಕ್ಲಬ್ ಆಶ್ರಯದಲ್ಲಿ ನೂತನ ರೋಟರಾಕ್ಟ್ ಕ್ಲಬ್ ಸ್ಥಾಪನೆಗೊಂಡಿತು. ರೋಟರಾಕ್ಟ್ ಕ್ಲಬ್

The post ಕಳಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೋಟರಾಕ್ಟ್ ಕ್ಲಬ್ ಅಧ್ಯಕ್ಷೆಯಾಗಿ ಇಂಚರ ವಿ.ಎಂ ಪ್ರಮಾಣ ವಚನ ಸ್ವೀಕಾರ appeared first on Kalasa live.

]]>

ಕಳಸ ಲೈವ್ ವರದಿ
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳಸ ರೋಟರಿ ಕ್ಲಬ್ ಆಶ್ರಯದಲ್ಲಿ ನೂತನ ರೋಟರಾಕ್ಟ್ ಕ್ಲಬ್ ಸ್ಥಾಪನೆಗೊಂಡಿತು. ರೋಟರಾಕ್ಟ್ ಕ್ಲಬ್ ಉದ್ಘಾಟನೆಯನ್ನು ಅನ್ನು ರೋಟರಿ ಜೋನ್ ಅಸಿಸ್ಟೆಂಟ್ ಗವರ್ನರ್ ರಾಜಗೋಪಾಲ್ ಜೋಶಿ ರವರು ನೆರವೇರಿಸಿ, ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.
ಇಂಚರ ವಿ.ಎಂ. ಅವರನ್ನು ಅಧ್ಯಕ್ಷರಾಗಿ, ಆಕಾಶ್ ಶೆಟ್ಟಿ ಅವರನ್ನು ಕಾರ್ಯದರ್ಶಿಯಾಗಿ, ಶ್ರೇಯಸ್ ಕೆ.ಎ. ಅವರನ್ನು ಸೆಲೆಕ್ಟ್ ಪ್ರೆಸಿಡೆಂಟ್ ಆಗಿ ಮತ್ತು ಅನ್ವಿತಾ, ಸಂಜನಾ ಎನ್., ಸುಜಯ್ ವೈ.ಎಸ್., ಶಬರೀಶ್ ಹೆಚ್.ಎಸ್., ಕೃತಿಕ್ ಹೆಚ್.ಎಂ., ಎಲ್. ದೀಕ್ಷಿತಾ, ಟಿ. ಅಂಜಲಿ, ಎಸ್. ಸಾನ್ವಿ ಮತ್ತು ಆದರ್ಶ್ ಜೈನ್ ಅವರನ್ನು ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಗಿದೆ.
ಕಾಲೇಜು ಸಿಡಿಸಿ ಕಾರ್ಯಧ್ಯಕ್ಷ ರಾಜೇಂದ್ರ ಹೆಬ್ಬಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಸಲು ರೋಟರಾಕ್ಟ್ ಕ್ಲಬ್ ಒಂದು ಪರಿಣಾಮಕಾರಿ ವೇದಿಕೆಯಾಗಿ ಕೆಲಸ ಮಾಡಲಿದೆ ಎಂದುಹೇಳಿದರು.
ರೋಟರಾಕ್ಟ್ ಜೋನಲ್ ಕೋಆರ್ಡಿನೇಟರ್ ಎಂ.ಆರ್. ರವಿ ಮಾತನಾಡಿ ರೋಟರಿ ಸಂಸ್ಥೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಪೊಲಿಯೋ ನಿರ್ಮೂಲನ ಕಾರ್ಯದಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದು, ವಿಶ್ವವನ್ನು ಪೊಲಿಯೋಮುಕ್ತಗೊಳಿಸುವ ದಿಸೆಯಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಕಳಸ ರೋಟರಿ ಕ್ಲಬ್ ಅಧ್ಯಕ್ಷ ಮಹೇಂದ್ರ ಹೆಚ್.ಜಿ g ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ವಿನಯ ಕುಮಾರ್ ಶೆಟ್ಟಿ, ರೋಟರಿ ಕ್ಲಬ್ ಕಾರ್ಯದರ್ಶಿ ವಿಶಾಲ್, ಪ್ರಾಧ್ಯಾಪಕರಾದ ವಿಶುಕುಮಾರ್, ದಿನೇಶ್ ಟಿ.ಎಂ., ಹಾಗೂ ಉಪನ್ಯಾಸಕರಾದ ಕಾಂತಿ ಪೈ, ಸುನಿಲ್ ಉಪಸ್ಥಿತರಿದ್ದರು.

The post ಕಳಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೋಟರಾಕ್ಟ್ ಕ್ಲಬ್ ಅಧ್ಯಕ್ಷೆಯಾಗಿ ಇಂಚರ ವಿ.ಎಂ ಪ್ರಮಾಣ ವಚನ ಸ್ವೀಕಾರ appeared first on Kalasa live.

]]>
https://www.kalasalive.com/?feed=rss2&p=9328 0
ಕಳಸ ಹಾಗೂ ಸುತ್ತಮುತ್ತಲಿನ ಕೃಷಿಕರಿಗಾಗಿ ವಿಶೇಷ ಪ್ರಕಟಣೆ! https://www.kalasalive.com/?p=9315 https://www.kalasalive.com/?p=9315#respond Fri, 28 Nov 2025 15:58:15 +0000 https://www.kalasalive.com/?p=9315 (ಜಾಹಿರಾತು) ಸಾಂಪ್ರದಾಯಿಕ ಅಡಿಕೆ–ಕಾಫಿ ಒಣಗಿಸುವಿಕೆಯಲ್ಲಿನ ಮಳೆಯ ಅನಿಶ್ಚಿತತೆ, ಅಸಮರ್ಪಕ ಒಣಗುವಿಕೆ, ಹೆಚ್ಚಿನ ಸಮಯ, ಗುಣಮಟ್ಟದ ಕುಸಿತ ಇವೆಯೆಲ್ಲ ನಿಮ್ಮ ಉತ್ಪಾದನೆಯನ್ನು ಪರಿಣಾಮಗೊಳಿಸುತ್ತಿದೆಯಾ? ಈಗ ನಿಮಗಾಗಿ

The post ಕಳಸ ಹಾಗೂ ಸುತ್ತಮುತ್ತಲಿನ ಕೃಷಿಕರಿಗಾಗಿ ವಿಶೇಷ ಪ್ರಕಟಣೆ! appeared first on Kalasa live.

]]>
(ಜಾಹಿರಾತು)
ಸಾಂಪ್ರದಾಯಿಕ ಅಡಿಕೆ–ಕಾಫಿ ಒಣಗಿಸುವಿಕೆಯಲ್ಲಿನ
ಮಳೆಯ ಅನಿಶ್ಚಿತತೆ, ಅಸಮರ್ಪಕ ಒಣಗುವಿಕೆ, ಹೆಚ್ಚಿನ ಸಮಯ, ಗುಣಮಟ್ಟದ ಕುಸಿತ ಇವೆಯೆಲ್ಲ ನಿಮ್ಮ ಉತ್ಪಾದನೆಯನ್ನು ಪರಿಣಾಮಗೊಳಿಸುತ್ತಿದೆಯಾ?
ಈಗ ನಿಮಗಾಗಿ ಹೊಸ ಪರಿಹಾರ!
ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಆಧಾರಿತ ಅಡಿಕೆ–ಕಾಫಿ ಒಣಗಿಸುವ ಸೌಲಭ್ಯ.
ನಿಮ್ಮ ಪ್ರದೇಶದಲ್ಲೇ ಲಭ್ಯ! ಯಾವುದಕ್ಕೂ ಚಿಂತಿಸಬೇಕಾಗಿಲ್ಲ!
ಇಲ್ಲಿ ಅಡಿಕೆಯನ್ನು ಸುಳಿದು ಬೇಯಿಸಿ, ನವೀನ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ನಿಯಂತ್ರಣ ವ್ಯವಸ್ಥೆಯ ಮೂಲಕ ಅಡಿಕೆ ಮತ್ತು ಕಾಫಿಯನ್ನು ಕೆಲವೇ ಗಂಟೆಗಳಲ್ಲಿ ನಿಖರವಾಗಿ ಒಣಗಿಸಿ ಕೊಡಲಾಗುತ್ತದೆ.
ವಿಶೇಷ ವೈಶಿಷ್ಟ್ಯಗಳು
ಮಾನವ ಹಸ್ತಕ್ಷೇಪವಿಲ್ಲದೆ ಶೇ.100 ನಿಖರ ನಿಯಂತ್ರಣ ಅತ್ಯುತ್ತಮ ಬಣ್ಣ ಮತ್ತು ಹೊಳಪು, ಸ್ಥಿರ ತೇವಾಂಶ, ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆ, ತೂಕದ ನಷ್ಟ ನಿಯಂತ್ರಣ. ಮಳೆಯಿಂದ ಅಥವಾ ಹವಾಮಾನ ಬದಲಾವಣೆಗಳಿಂದ ಯಾವುದೇ ತೊಂದರೆ ಇಲ್ಲ
ವೇಗದ ಒಣಗಿಸುವಿಕೆ
ಬೇಯಿಸಿದ ಅಡಿಕೆ 10 ಗಂಟೆಗಳೊಳಗೆ, ಹಸಿ ಕಾಫಿ 8 ಗಂಟೆಗಳಲ್ಲಿ
ನಿಮಗೆ ಸಿಗುವ ಲಾಭಗಳು
ಉತ್ತಮ ಗುಣಮಟ್ಟ, ರಿಯಾಯಿತಿ ದರ, ಕಡಿಮೆ ಸಮಯ, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ
📞 ನಿಮ್ಮ ಸಮಯ ಬುಕ್ ಮಾಡಲು ಈಗಲೇ ಸಂಪರ್ಕಿಸಿ:6362023328, 8618173756, 8088285418, 8971670167

The post ಕಳಸ ಹಾಗೂ ಸುತ್ತಮುತ್ತಲಿನ ಕೃಷಿಕರಿಗಾಗಿ ವಿಶೇಷ ಪ್ರಕಟಣೆ! appeared first on Kalasa live.

]]>
https://www.kalasalive.com/?feed=rss2&p=9315 0