ಹೊರನಾಡು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ಸನ್ನಿದಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವರ್ಧಂತ್ಯುತ್ಸವ ಕಾರ್ಯಕ್ರಮ ಮಂಗಳವಾರ ವಿಜ್ರಂಬಣೆಯಿಂದ ನೆರವೇರಿತು .
1973ರ ಮೇ 5 ರಂದು ನೂತನವಾಗಿ ನಿರ್ಮಿಸಿದ ಶಿಲಾಮಯ ದೇವಾಲಯದಲ್ಲಿ ಶ್ರೀ ಆದಿಶಕ್ತಿ ದೇವಿಯ ಪ್ರತಿಷ್ಠೆ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ಪುನಃ ಪ್ರತಿಷ್ಠಾಪನೆಯನ್ನು ನೆರವೇರಿಸಲಾಗಿತ್ತು.ಇದರ ವರ್ಧಂತ್ಯುತ್ಸವದ ಆ ಪುಣ್ಯ ದಿನವು ವೈಶಾಖ ಶುಕ್ಲ ತದಿಗೆ ಮಂಗಳವಾರದಂದು ದೇವಿಯ ಸನ್ನಿದಿಯಲ್ಲಿ ಸಂಪನ್ನಗೊಂಡಿತು.
ಧಾರ್ಮಿಕ ಕಾರ್ಯಕ್ರಮದ ನಿಮಿತ್ತ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಗಣಪತಿ ಹೋಮ,ಚಂಡಿಕಾ ಹೋಮ,ಲಲಿತಾ ಹೋಮ,ಲಕ್ಷ್ಮೀನಾರಾಯಣ ಹೃದಯ ಹೋಮ,ರಾಮತಾರಕ ಹೋಮ,ಅನ್ನಪೂರ್ಣ ಮೂಲ ಮಂತ್ರ ಹೋಮ,ಬಾಲಾತ್ರಿಪುರ ಸುಂದರಿ ಹೋಮ,ಗಾಯತ್ರಿ ಹೋಮ,ನವಗ್ರಹ ಹೋಮ,ರುದ್ರ ಹೋಮ,ವೇದ ಪಾರಾಯಣ ನಡೆಯಿತು.
ಕಾರ್ಯಕ್ರಮದಲ್ಲಿ ದೇವಸ್ಥಾನದ ಧರ್ಮಕರ್ತದಾದ ಡಾ|ಜಿ.ಭೀಮೇಶ್ವರ ಜೋಷಿ ಹಾಗೂ ಕುಟುಂಬ ವರ್ಗ ಸೇರಿದಂತೆ ಸ್ಥಳಿಯ, ರಾಜ್ಯ ಹೋರರಾಜ್ಯಗಳ ಸಾವಿರಾರು ಭಕ್ತರು ಬಾಗವಹಿಸಿದ್ದರು.
