
ಕಳಸ ಲೈವ್ ವರದಿ
ಶೃಂಗೇರಿ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳು ಇದೇ ತಿಂಗಳ 22 ನೇ ತಾರಿಕಿನಂದು ಕಳಸ ಕಲಶೇಶ್ವರ ದೇವಸ್ಥಾನಕ್ಕೆ ಆಗಮಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಉಪಸ್ಥಿತಿ ಇರಲಿದ್ದಾರೆ.
ಅಂದು ಶ್ರೀ ಸನ್ನಿದಾನಂಗಳವರ ಸಮಕ್ಷಮದಲ್ಲಿ ಏಕಾದಶವಾರು ರುದ್ರ ಹೋಮದ ಪೂರ್ಣಾಹುತಿ, ಮತ್ತು ಶ್ರೀ ಕಲಶೇಶ್ವರ ಸ್ವಾಮಿ ದೇವರಿಗೆ ನವ ಕಲಾಶಾಭಿಷೇಕ ಹಾಗೂ ಶ್ರೀ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ.
ಕಳಸ ರುದ್ರಪಾದ ಶ್ರೀಮತಿ ಶಾಂತಲಾ ಮತ್ತು ಶ್ರೀ ಜಯಕುಮಾರ್ ಭಟ್ ಮತ್ತು ಮಕ್ಕಳು ಇವರು ಕಲಶೇಶ್ವರ ದೇವಸ್ಥಾನಕ್ಕೆ ನೀಡಿದ ದೇವಸ್ಥಾನದ ಚಂದ್ರಶಾಲೆಗೆ ಮತ್ತು ಗರ್ಭಗುಡಿಯ ಮಧ್ಯೆ ಕಬ್ಬಿಣದ ಮೇಲ್ಚಾವಣಿ, ದೇವಸ್ಥಾನದ ಚಂದ್ರಶಾಲೆಗೆ ಸುತ್ತ ಗ್ರಾನೈಟ್ ನೆಲಹಾಸು ಅಳವಡಿಕೆ, ಆನೆ ದೇವರ ಸುತ್ತ ಗ್ರಾನೈಟ್ ನೆಲಹಾಸು ಮತ್ತು ಮೇಲ್ಚಾವಣಿ, ಕ್ಷೇತ್ರಪಾಲ ದೇವರಿಗೆ ಮೇಲ್ಚಾವಣಿ, ದೇವಸ್ಥಾನದ ಮೆಟ್ಟಿಲಿಗೆ ಸ್ಟೀಲಿನ ಕೈಪಿಡಿ, ಅಡುಗೆ ಮನೆಯ ಹಿಂಭಾಗದಲ್ಲಿ ನೆಲಕ್ಕೆ ಸಂಪೂರ್ಣ ಗ್ರಾನೈಟ್ ಅಳವಡಿಕೆಯ ಕಾಮಗಾರಿಯನ್ನು ದಾನದ ರೂಪದಲ್ಲಿ ನೀಡಿದ್ದು ಇದನ್ನು ಜಗದ್ಗುರು ಶ್ರೀಶ್ರೀಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳ ದಿವ್ಯ ಹಸ್ತದಿಂದ ಸಮರ್ಪಣೆಯಾಗಲಿದೆ.