
ಕಳಸ ಲೈವ್ ವರದಿ
ವಿಶ್ವ ಹಿಂದೂ ಪರಿಷದ್ ಬಜರಂಗದಳ ಶೃಂಗೇರಿ ಜಿಲ್ಲೆ ಕಳಸ ಪ್ರಖಂಡ ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮೇಲೆ ನಡೆಸುತ್ತಿರುವ ದೌರ್ಜನ್ಯ, ಪಹಲ್ಗಮ್ನಲ್ಲಿ ಹಿಂದೂಗಳನ್ನ ಗುರಿಯಾಗಿಟ್ಟಿಸಿಕೊಂಡು ನಡೆಸಿದ ಭಯೋತ್ಪಾದನಾ ಕೃತ್ಯ ಹಾಗೂ ಮಂಗಳೂರಿನ ಬಜ್ಪೆಯಲ್ಲಿ ಬಜರಂಗದಳ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಬರ್ಬರ ಹತ್ಯೆ ಖಂಡಿಸಿ
ಮೇ 5ರ ಸೋಮವಾರ ಕಳಸ ಸ್ವಯಂ ಪ್ರೇರಿತ ಬಂದ್ ಗೆ ಕರೆ ನೀಡಲಾಗಿದೆ.
ಅಂದು ಬೆಳಿಗ್ಗೆ 6.00 ರಿಂದ ಸಂಜೆ 6.00 ಬಂದ್ ಗೆ ಕರೆ ನೀಡಲಾಗಿದ್ದು, ಬೆಳಿಗ್ಗೆ 10 ಗಂಟೆಗೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಕಲಶೇಶ್ವರ ದೇವಸ್ಥಾನ ವರೆಗೆ ಪ್ರತಿಭಟನೆ ಮರವಣಿಗೆ ಹಾಗೂ ಪ್ರತಿಭಟನಾ ಸಭೆ ನಡೆಯಲಿದೆ.
ಈ ಸ್ವಯಂ ಪ್ರೇರಿತ ಬಂದ್ ಗೆ ಹಿಂದೂ ಸಮಾಜ ಸಹಕಾರ ನೀಡಿ ಹಿಂದೂ ಸಮಾಜದ ಪರ ಧ್ವನಿಯಾಗಬೇಕು ಎಂದು ವಿಶ್ವ ಹಿಂದೂ ಪರಿಷದ್ ಬಜರಂಗದಳ ಶೃಂಗೇರಿ ಜಿಲ್ಲೆ ಸಂಚಾಲಕ ಅಜಿತ್ ಕುಲಾಲ್ ತಿಳಿಸಿದ್ದಾರೆ.