
ಕಳಸ ಲೈವ್ ವರದಿ
ತಾ|| 08-05-2025 ಗುರುವಾರದಂದು ಬೆಳಿಗ್ಗೆ 11-00 ಗಂಟೆಗೆ ದಿ|| ಪೂಜ್ಯ ಶ್ರೀ ಡಿ.ಬಿ.ವೆಂಕಟಸುಬ್ಬಾ ಜೋಯಿಸ್ ಮತ್ತು ದಿ||ಶ್ರೀಮತಿ ನರಸಮ್ಮ ವೆಂಕಟಸುಬ್ಬಾ ಜೋಯಿಸ್ ದಂಪತಿಗಳ “ಕಂಚಿನ ಪುತ್ಥಳಿ”ಯನ್ನು ಆಹ್ವಾನಿತ ಗಣ್ಯ ಮಹನೀಯರ ಸಮ್ಮುಖದಲ್ಲಿ ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಛಂದ್ ಗೆಹ್ಲೋಟ್ ರವರ ಅಮೃತ ಹಸ್ತದಿಂದ ಅನಾವರಣಗೊಳಿಸಲಿದ್ದಾರೆ ಎಂದು ಹೊರನಾಡು ಕ್ಷೇತ್ರದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು ಅಂದು ರಾಜ್ಯಪಾಲರು ಮತ್ತು ಗಣ್ಯ ಮಹನೀಯರಿಗೆ ಝಡ್ಪ್ಲಸ್ ಕ್ಯಾಟಗರಿ ಸೆಕ್ಯೂರಿಟಿ ವ್ಯವಸ್ಥೆಯನ್ನು ಪೆÇಲೀಸ್ ಇಲಾಖೆಯು ಮಾಡಿರುತ್ತದೆ. ಹಾಗೂ ಇಡೀ ಕಾರ್ಯಕ್ರಮದಲ್ಲಿ ಅತಿಥಿಗಳ ರಕ್ಷಣಾ ವ್ಯವಸ್ಥೆಯ ಹಿತ ದೃಷ್ಟಿಯಿಂದ ಪೆÇಲೀಸ್ ಇಲಾಖೆಯು ಕಟ್ಟುನಿಟ್ಟಿನ ಬಂದೋಬಸ್ತನ್ನು ಮಾಡಿರುತ್ತಾರೆ. ನಮ್ಮ ಆಹ್ವಾನವನ್ನು ಗೌರವಿಸಿ ಬರುವಂತಹ ಎಲ್ಲಾ ಆಹ್ವಾನಿತರಿಗೆ, ಭಕ್ತರಿಗೆ ಯಾವುದೇ ರೀತಿಯ ತೊಂದರೆಗಳು ಆಗಬಾರದು ಎಂಬ ದೃಷ್ಟಿಯಿಂದ ಈ ಕೆಳಗಿನ ವ್ಯವಸ್ಥೆಗಳನ್ನು ಮಾಡಿರುತ್ತೇವೆ. ದಯಮಾಡಿ ಸಹಕರಿಸಿ, ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿಕೊಡಬೇಕಾಗಿ ವಿನಮ್ರವಾಗಿ ಆಶಿಸುತ್ತೇವೆ.
ಈ ಸಂದರ್ಭದಲ್ಲಿ ಬರುವಂತಹ ಭಕ್ತಾದಿಗಳಿಗೆ ಮತ್ತು ತಮಗೆ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲು ಅವಕಾಶ ಮಾಡಿಕೊಡುವ ಉದ್ದೇಶದಿಂದಾಗಿ ಶ್ರೀಕ್ಷೇತ್ರದ ಆವರಣದ ಒಳಗೆ ಬರಲು ಸೂಕ್ತ ಪಾಸ್, ವಾಹನ ಪಾಸ್, ಗುರುತಿನ ಚೀಟಿಯನ್ನು ದೇವಸ್ಥಾನದ ಮುಖ್ಯ ರಸ್ತೆಯಲ್ಲಿ ತಾತ್ಕಾಲಿಕವಾಗಿ ನಿರ್ಮಾಣ ಮಾಡಿರುವ ಗೇಟ್ ನಂ-1 ಕಛೇರಿಯಲ್ಲಿ ಪಡೆದುಕೊಳ್ಳಲು ವ್ಯವಸ್ಥೆ ಮಾಡಿದ್ದೇವೆ. ನೀವುಗಳು ಅಂದು ಬೆಳಿಗ್ಗೆ 09-00 ಗಂಟೆಯ ಒಳಗೆ ಶ್ರೀಕ್ಷೇತ್ರವನ್ನು ತಲುಪಿ ಸೂಕ್ತ ಬ್ಯಾಡ್ಜ್, ಪಾಸ್ಗಳನ್ನು ತೆಗೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು
ಮೊಬೈಲ್ ಸಂಖ್ಯೆ: 8217629979