ಕಳಸ ಲೈವ್ ವರದಿ
ರಾಜ್ಯ ಸರ್ಕಾರ ಕೆ.ಎಸ್.ಆರ್.ಟಿ.ಸಿ ಮತ್ತು ಬಿ.ಎಂ.ಟಿ.ಸಿ ಬಸ್ಸುಗಳಿಗೆ ಮಹಿಳೆಯರಿಗೆ ಮತ್ತು ಹೆಣ್ಣುಮಕ್ಕಳಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಯನ್ನು ಖಾಸಗಿ ಬಸ್ ಗಳಿಗೂ ವಿಸ್ತರಿಸಬೇಕು “ಕರ್ನಾಟಕ ರಾಜ್ಯ ಮಜಲು ವಾಹನ ಬಸ್ ಮಾಲೀಕರ ಸಂಘಗಳ ಒಕ್ಕೂಟ’ ಆಗ್ರಹಿಸಿದೆ.

ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಕೆ.ಬಾಲಕೃಷ್ಣ ಭಟ್, ಶಕ್ತಿ ಯೋಜನೆಯನ್ನು ಸರ್ಕಾರಿ ಬಸ್ಗಳಿಗೆ ಸೀಮಿತಗೊಳಿಸದೆ ಖಾಸಗಿ ಬಸ್ಗಳಿಗೂ ಸಾವಿರ ವಿಸ್ತರಿಸುವ ಅಗತ್ಯ ಇದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಖಾಸಗಿ ಬಸ್ಗಳಿಗೆ 100 ವರ್ಷಗಳ ಇತಿಹಾಸ ಇದ್ದು, ಸದ್ಯ 9,000 ಬಸ್ಗಳು 16 ಜಿಲ್ಲೆಗಳಲ್ಲಿ ಸಂಚಾರ ಮಾಡುತ್ತಿವೆ. 75 ಸಾವಿರ ನೌಕರರು ಖಾಸಗಿ ಬಸ್ ಉದ್ಯಮ ಅವಲಂಬಿಸಿದ್ದಾರೆ. ರಾಜ್ಯದ
ಎಲ್ಲ ಖಾಸಗಿ ಬಸ್ಗಳ ತೆರಿಗೆ, ವಿಮೆ, ಬಿಡಿಭಾಗ, ಡೀಸೆಲ್ ಮೂಲಕ ವರ್ಷಕ್ಕೆ 3 1,600 ಕೋಟಿ ತೆರಿಗೆ ಪಾವತಿ ಆಗುತ್ತಿದೆ.

ಮಲೆನಾಡಿನ ಗುಡ್ಡಗಾಡು ಪ್ರದೇಶದಲ್ಲಿ ಅಧಿಕ ನಿರ್ವಹಣೆ ವೆಚ್ಚ ಇದ್ದರೂ ಉತ್ತಮ ಸೇವೆ ನೀಡಲಾ ಗುತ್ತಿದೆ. ವೃದ್ಧರಿಗೆ, ವಿದ್ಯಾರ್ಥಿಗಳಿಗೆ, ಅಂಗವಿಕಲರಿಗೆ, ಸೈನಿಕರಿಗೆ ಶೇ. 50ರ ರಿಯಾಯಿತಿ ನೀಡಲಾಗುತ್ತಿದೆ. ಶಕ್ತಿ ಯೋಜನೆಯ ಅನುಷ್ಟಾನದ ಎರಡು ದಿನದಲ್ಲಿ ಪ್ರತಿ ಬಸ್ ದಿನವೊಂದಕ್ಕೆ ಸುಮಾರು ನಾಲ್ಕರಿಂದ ಐದು ಸಾವಿರ ನಷ್ಟವುಂಟಾಗುತ್ತಿದೆ.

ಈ ಯೋಜನೆಯಿಂದ ಖಾಸಾಗಿ ಬಸ್ ಉದ್ಯಮ ಸ್ಥಗಿತಗೊಂಡಲ್ಲಿ ಖಾಸಾಗಿ ಬಸ್ಸುಗಳನ್ನು ಅವಲಂಬಿಸಿರುವ ಮಾಲೀಕರು, ಬಸ್ ಚಾಲಕ, ನಿರ್ವಾಹಕರು ಸೇರಿದಂತೆ ಸಾವಿರಾರು ಕುಟುಂಬಗಳು ಬೀದಿ ಪಾಲಾಗಲಿವೆ.
ರಾಜ್ಯ ಸಾರಿಗೆ ಬಸ್ಗಳಿಗೆ ಸರ್ಕಾರ ನೀಡುವ ಅನುದಾನವನ್ನು ಖಾಸಗಿ ಬಸ್ಗಳಿಗೂ ವಿಸ್ತರಿಸಿದರೆ ಖಾಸಗಿ ಬಸ್ ಉದ್ಯಮ ಸಂಕಷ್ಟದಿಂದ ಪಾರಾಗಲು ಸಾಧ್ಯವಾಗಲಿದೆ ಎಂದೂ ಕೆ.ಕೆ.ಬಾಲಕೃಷ್ಣ ಭಟ್ ಪತ್ರದಲ್ಲಿ ವಿವರಿಸಿದ್ದಾರೆ.

