![](https://www.kalasalive.com/wp-content/uploads/2023/06/1991a149-55d2-4d8c-9a91-c8300aff4ccc.jpg)
ಕಳಸ ಲೈವ್ ವರದಿ
ಅಕ್ಕಿ ಕೊರತೆ ಹಿನ್ನೆಯಲ್ಲಿ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ನೀಡಲು ಉದ್ದೇಶಿದ್ದ ಐದು ಕೆಜಿ ಅಕ್ಕಿಯ ಬದಲು ಹಣ ನೀಡಲು ಸಂಪುಟ ಸಭೆ ತೀರ್ಮಾನ ಮಾಡಿದೆ.
ಈ ಬಗ್ಗೆ ಸಂಪುಟ ಸಭೆ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಯಾರ ಹೆಸರಿನಲ್ಲಿ ಕಾರ್ಡ್ ಇದೆಯೋ ಅವರ ಖಾತೆಗೆ ಜುಲೈ 1ರಿಂದ ಅನ್ವಯವಾಗುವಂತೆ ಹಣ ಜಮೆ ಮಾಡುತ್ತೇವೆ. ಒಬ್ಬರಿಗೆ ಐದು ಕೆಜಿ ಅಕ್ಕಿಗೆ 170 ರೂ.ಗಳನ್ನು ನೀಡುತ್ತೇವೆ. ಅಕ್ಕಿ ಲಭ್ಯವಾಗುವವರೆಗೆ ತಾತ್ಕಾಲಿಕ ಹಾಗೂ ಪರ್ಯಾಯ ವ್ಯವಸ್ಥೆ ಇದಾಗಿದೆ ಎಂದು ತಿಳಿಸಿದರು.