ಕಳಸ ಲೈವ್ ವರದಿ
ಕಳಸ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಶುಕ್ರವಾರದಿಂದ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದಿಂದ ಪ್ರಸಾದ ಭೋಜನವನ್ನು ನೀಡಲಾಯಿತು.
ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಶುಕ್ರವಾರ ಪ್ರಸಾದ ಭೋಜನವನ್ನು ಮಕ್ಕಳಿಗೆ ಬಡಿಸುವುದರ ಮುಖಾಂತರ ಚಾಲನೆ ನೀಡಿದರು.
ಈಗಾಗಲೇ ಹೊರನಾಡು ಕ್ಷೇತ್ರದಿಂದ ಹೊರನಾಡು ಸರ್ಕಾರಿ ಶಾಲೆ, ಕಳಸ ಪ್ರಬೋಧಿನಿ ವಿದ್ಯಾಕೇಂದ್ರ, ಕಳಸ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಅನ್ನ ಪ್ರಸಾದ ಭೋಜನವನ್ನು ನೀಡಲಾಗುತ್ತಿತ್ತು.ಇದೀಗ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೂ ಪ್ರಸಾದ ಭೋಜನವನ್ನು ವಿಸ್ತರಿಸಿದಂತಾಗಿದೆ.
ಇದು ಶಾಲಾ ಕಾಲೇಜಿಗೆ ಬರುವ ಸಾವಿರಾರು ವಿದ್ಯಾರ್ಥಿಗಳ ಹಸಿದ ಹೊಟ್ಟೆಯನ್ನು ತುಂಬಿಸಿದಂತಾಗಿದೆ. ಅನ್ನಪೂರ್ಣೇಶ್ವರಿ ದೇವಸ್ಥಾನದ ಈ ವಿಶಿಷ್ಟ ಸೇವೆಯನ್ನು ಸ್ಥಳೀಯರು ಕೊಂಡಾಡಿದ್ದಾರೆ.ಕ್ಷೇತ್ರದ ಅನ್ನದಾಸೋಹದ ಬಗ್ಗೆ ಪೆÇೀಷಕರು ಮತ್ತು ವಿದ್ಯಾರ್ಥಿಗಳು ಕೂಡ ಸಂತಸ ತೋರಿದ್ದಾರೆ.ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ರಫೀಕ್, ಉಪಾಧ್ಯಕ್ಷ ಚಂದ್ರಶೇಖರ್, ಪ್ರಾಂಶುಪಾಲ ಅನಂತ ಪದ್ಮನಾಭ, ಉಪನ್ಯಾಸಕರಾದ ಮುಕುಂದ್ ಕಿಶೋರ್ ಇದ್ದರು