ಕಳಸ ಲೈವ್ ವರದಿ
ಕಳಸ ಮುನ್ನೂರು ಪಾಲು ಅವಳಿ ಕುವರಿಗಳಾದ ಪೈಕಿ ಹಿತಾ ಹೆಬ್ಬಾರ್ ಮತ್ತು ಹರ್ಷಿತಾ ಹೆಬ್ಬಾರ್ ಸಮಾನ ಅಂಕ ಗಳಿಸಿ ರಿಸಲ್ ನಲ್ಲೂ ಹೋಲಿಕೆ ಮೆರೆದು ಗಮನ ಸೆಳೆದಿದ್ದಾರೆ.
ಮೂಡಬಿದ್ರೆ ಎಕಲೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ಅವಳಿ ಜವಳಿಗಳಾದ ಹರ್ಷಿತಾ ಹೆಬ್ಬಾರ್ ಮತ್ತು ಹಿತಾ ಹೆಬ್ಬಾರ್ ಈ ಬಾರಿ ಪಿಯುಸಿಯಲ್ಲಿ ತಲಾ 576 ಅಂಕ ಪಡೆಯುವ ಮೂಲಕ ಶೇ.96 ಫಲಿತಾಂಶ ಪಡೆದಿದ್ದಾರೆ.
ಮೂಲತಃ ಕಳಸ ಮುನ್ನೂರು ಪಾಲು ನಿವಾಸಿ ಕೃಷಿಕ ಅರುಣ್ -ಸಂಧ್ಯಾ ದಂಪತಿಯ ಅವಳಿ ಮಕ್ಕಳ ಪೈಕಿ ಹಿತಾ ಹೆಬ್ಬಾರ್ ವಿಜ್ಞಾನ ವಿಭಾಗ ಮತ್ತು ಹರ್ಷಿತಾ ಹೆಬ್ಬಾರ್ ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾಗಿದ್ದವರು. ಹರ್ಷಿತಾ ಎಕಾನಮಿಕ್ಸ್ನಲ್ಲಿ ನೂರಕ್ಕೆ ನೂರು ಅಂಕ ಪಡೆದಿದ್ದು, ಹಿತಾ ಸಂಸ್ಕøತ ಜತೆಗೆ ಗಣಿತದಲ್ಲೂ ನೂರಕ್ಕೆ ನೂರು ಅಂಕ ಗಳಿಸಿದ್ದಾರೆ. ಬೇರೆ ಬೇರೆ ಕೋರ್ಸ್ ಆಯ್ದುಕೊಂಡ ಈ ಅವಳಿಗಳ ಪೈಕಿ ಹರ್ಷಿತಾ ಬಿಕಾಂ ಪದವಿ ಪಡೆದು ಜತೆಗೆ ಎಸಿಸಿಎ ತರಬೇತಿಗೆ ಆಸಕ್ತರಾಗಿದ್ದಾರೆ. ಹಿತಾ ಸಿಇಟಿ ಮೂಲಕ ಎಂಜಿನಿಯರಿಂಗ್ ಕಲಿಕೆಯ ಉತ್ಸಾಹವನ್ನು ಹಂಚಿಕೊಂಡಿದ್ದಾರೆ.