


ಕಳಸ ಲೈವ್ ವರದಿ
ಶ್ರೀ ಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ಮಾತೆಗೆ ಲಕ್ಷ ದೀಪೋತ್ಸವದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮದಲ್ಲಿ ಕೋಟಿ ಕುಂಕುಮಾರ್ಚನೆ ಮಂಗಳವಾರ ನಡೆಯಿತು.
ಸಮಸ್ತ ಭಕ್ತಾದಿಗಳ ಸಮ್ಮುಖದಲ್ಲಿ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ದಂಪತಿಗಳಿಂದ ಶ್ರೀಮಾತೆಗೆ ಸಮರ್ಪಣೆಯಾಯಿತು.
ಸಾಮಾಜಿಕ ಕಾರ್ಯಕ್ರಮದಲ್ಲಿ “13ನೇ ವರ್ಷದ ರಕ್ತದಾನ ಶಿಬಿರ”ದ ಉದ್ಘಾಟನೆಯನ್ನು ಧರ್ಮಕರ್ತ ದಂಪತಿಗಳು ನೆರವೇರಿಸಿರು. ಶಿವಮೊಗ್ಗ ಮಿಡ್ ಟೌನ್ ರೋಟರಿ ಚಾರಿಟಿ ಫೌಂಡೇಶನ್, ರೋಟರಿ ಕ್ಲಬ್, ಶಿವಮೊಗ್ಗ. ಇವರು ಶಿಬಿರವನ್ನು ನಡೆಸಿಕೊಟ್ಟರು.



