
oplus_0
ಕಳಸ ಲೈವ್ ವರದಿ
ಶಾಸಕಿ ನಯನ ಮೋಟಮ್ಮ ಕಳಸ ತಾಲ್ಲೂಕಿನ ಕೆಲವೆಡೆ ವಿವಿಧ ಕಾಮಗಾರಿಗಳಿಗೆ ಮಂಗಳವಾರ ಚಾಲನೆ ನೀಡಿದರು.
ಕಳಸ ತಾಲ್ಲೂಕು, ಕಳಸ ಗ್ರಾ. ಪಂಚಾಯತಿ ವ್ಯಾಪ್ತಿಯ ನೆಲ್ಲಿಕೆರೆ ಅಂಗನವಾಡಿ ಕೇಂದ್ರವನ್ನು ಉದ್ಘಾಟನೆ ಮಾಡಿ, ಕಳಸ ಅಣ್ಣಪ್ಪ ನಗರ ರಸ್ತೆಗೆ 10 ಲಕ್ಷ ಮೊತ್ತದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಿ ನಂತರ ತಾಲ್ಲೂಕು ಪಂಚಾಯಿತಿಯಲ್ಲಿ ಕಳಸ ತಾಲ್ಲೂಕು ಮಟ್ಟದ ಗ್ಯಾರಂಟಿ ಕಛೇರಿ ಉದ್ಘಾಟನೆಯನ್ನು ಮಾಡಿದರು.55 ಲಕ್ಷ ಮೊತ್ತದ ಅಬ್ಬುಗುಡಿಗೆ ಸೇತುವೆ ಉದ್ಘಾಟನೆಯನ್ನು ಮಾಡಿ, ಸಂಸೆ ಗ್ರಾ. ಪಂಚಾಯತಿ ವ್ಯಾಪ್ತಿಯ ಮಳ್ಳೋಡಿ ರಸ್ತೆಗೆ 5 ಕೋಟಿ ಮೊತ್ತದ ಕಾಮಗಾರಿಗೆ ಗುದ್ದಲಿ ಪೂಜೆ. ಕೊಟ್ಟಿಗೆಹಾರ-ಕಳಸ ರಸ್ತೆಯಿಂದ ಮರಸಣಿಗೆ ಗಾಳಿಗಂಡಿ ತೊಡ್ಲು ಮಾರ್ಗವಾಗಿ ಕುದುರೆಮುಖ-ಕಳಸ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ 2 ಕೋಟಿ ಮೊತ್ತದ ಅಭಿವೃದ್ಧಿಗೆ ಚಾಲನೆ. 2 ಕೋಟಿ ವೆಚ್ಚದಲ್ಲಿ ಹಿರೇಬೈಲು ಮಲ್ಲೇಶನಗುಡ್ಡ ಬಾಳೆಹೊಳೆ ರಸ್ತೆಯಿಂದ ನಾಗಮಕ್ಕಿ ಮೂಲಕ ಮರಸಣಿಗೆ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಗುದ್ದಲಿ ಪೂಜೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಕಳಸ ತಾಲ್ಲೂಕಿನ ಇನ್ನೂ ಬಹಳಷ್ಟು ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ಆಗಬೇಕಾಗಿದೆ.ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಕಾಮಗಾರಿಯನ್ನು ಮಾಡಲಾಗುವುದು.ಕಳಸ ಪಟ್ಟಣದಲ್ಲಿ ಮಿನಿ ವಿಧಾನಸೌದ ಮಾದರಿಯಲ್ಲಿ ಪ್ರಜಾಸೌಧ ನಿರ್ಮಾನಕ್ಕೆ 5 ಕೋಟಿ ಮಂಜೂರಾಗಿದೆ.ಈಗಿನ ನಾಡ ಕಚೇರಿ ನಿವೇಶನದಲ್ಲೇ 2 ಮಹಡಿ ಕಟ್ಟಡ ಕಾಮಗಾರಿ ಆರಂಭ ಆಗಲಿದೆ.ತಾಲ್ಲೂಕಿನ ಜನರಿಗೆ ಅನುಕೂಲ ಆಗುವಂತೆ ಪ್ರಜಾಸೌದದಲ್ಲಿ ತಹಶೀಲ್ದಾರ್ ಕಚೇರಿ ಜೊತೆಗೆ ಉಪನೋಂದಣಾಧಿಕಾರಿ, ಸರ್ವೆ, ಆಹಾರ ಇಲಾಖೆ ಜೊತೆಗೆ ಮತ್ತಿತರೆ ಇಲಾಖೆಗಳ ಕಾರ್ಯರಂಭ ಆಗಲಿದೆ ಎಂದು ಹೇಳಿದ ಅವರು ಕಳಸ ಸಮೀಪದ ಹಿನಾರಿ ಬಳಿ ಸರ್ವೆ ನಂ 90ರಲ್ಲಿ ಅಗ್ನಿಶಾಮಕ ದಳದ ಕಟ್ಟಡಕ್ಕೂ 3.5ಕೋಟಿ ರೂ ಮಂಜೂರಾಗಿದೆ.ಕಳಸ ಆಸ್ಪತ್ರೆಗೆ ವೈಧ್ಯರು ಮತ್ತು ಸಿಬ್ಬಂಧಿಗಳ ಕೊರತೆ ಇದೆ.ಕಡ್ಡಾಯ ಗ್ರಾಮೀಣ ಸೇವೆಯಡಿಯಲ್ಲಿ ವೈದ್ಯರನ್ನು ನೇಮಕ ಮಾಡಲು ಈಗಾಗಲೇ ಸಂಬಂಧಪಟ್ಟವರಿಗೆ ತಿಳಿಸಿದ್ದೇನೆ.ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತಾಲ್ಲೂಕು ಆರೋಗ್ಯ ಕೇಂದ್ರವನ್ನಾಗಿ ಮಾಡಲು ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಳಸ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೇಣಿಕ್,ಕೆಪಿಸಿಸಿ ಸದಸ್ಯ ಕೆ.ಆರ್.ಪ್ರಭಾಕರ್, ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಕಳಸ ಅಧ್ಯಕ್ಷ ಗಣೇಶ್ ಭಟ್, ಕಾಂಗ್ರೇಸ್ ಮುಖಂಡರಾದ ವೀರೇಂದ್ರ,ಮಹೇಶ್ ಕೆ.ಸಿ, ವಿಶ್ವನಾಥ್, ರಾಜೇಂದ್ರ ಹೆಬ್ಬಾರ್, ಮಹಮ್ಮದ್ ರಫೀಕ್, ಸುಜಿತ್, ಉದಯ್, ರಾಜಪ್ಪ ಗೌಡ, ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ವಿಶ್ವನಾಥ ಇದ್ದರು.