
ಕಳಸ ಲೈವ್ ವರದಿ
ಕಳಸ ಭದ್ರಾ ನದಿಯ ರುದ್ರಪಾದದಲ್ಲಿ ಮೂಡಿಗೆರೆ ತಾಲ್ಲೂಕಿನ ಬಣಕಲ್ ಮತ್ತಿ ಕಟ್ಟೆಯ ಯುವಕನ ಶವ ಪತ್ತೆಯಾಗಿದೆ.
ಮೃತವ್ಯಕ್ತಿ ಮತ್ತಿಕಟ್ಟೆಯ ಸುಹಾಸ್(28) ಎಂದು ಗುರುತಿಸಲಾಗಿದೆ.
ಸುಹಾಸ್ ಗುಜರಾತ್ನಲ್ಲಿ ಕಂಪೆನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಒಂದು ವಾರದ ಹಿಂದೆಯಷ್ಟೆ ಮತ್ತಿಕಟ್ಟೆಯಲ್ಲಿ ನೂತನವಾಗಿ ಕಟ್ಟಿದ ತನ್ನದೇ ಮನೆಯ ಗೃಹಪ್ರವೇಶಕ್ಕೆಂದು ಬಂದಿದ್ದಾರೆ. ಶುಕ್ರವಾರ ಬೆಳಿಗ್ಗೆ ಬಣಕಲ್ಗೆ ಹೋಗಿ ಬರುತ್ತೇನೆ ಎಂದು ಹೇಳಿ ಬೈಕ್ ಹತ್ತಿದವರು ಮತ್ತೆ ಮನೆ ಕಡೆ ವಾಪಾಸು ಆಗಲಿಲ್ಲ. ಇತ್ತ ಪೋಷಕರು ಕಾಣೆಯಾದ ವ್ಯಕ್ತಿಯ ಬಗ್ಗೆ ಹುಡುಕಾಟ ನಡೆಸುತ್ತಿದ್ದರು.
ಶನಿವಾರ ರುದ್ರಪಾದದಲ್ಲಿ ಸ್ಥಳಿಯರು ಸ್ನಾನ ಮಾಡುತ್ತಿರುವ ಸಂದರ್ಭದಲ್ಲಿ ತೇಲಾಡುತ್ತಿದ್ದ ಶವವನ್ನು ಕಂಡು ಕಳಸ ಪೊಲೀಸ್ ಠಾಣೆಗೆ ಸುದ್ಧಿಯನ್ನು ಮುಟ್ಟಿಸಿದ್ದಾರೆ.ಈ ಶವವನ್ನು ಪೋಷಕರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಸುಹಾಸ್ ಶವ ಎಂದು ಗುರುತಿಸಿದ್ದಾರೆ.
ಒಬ್ಬನೇ ಮಗನನ್ನು ಕಳೆದುಕೊಂಡಿದ್ದ ಪೂಷಕರ ಆಕ್ರಂದನ ಮುಗಿಲು ಮಟ್ಟಿತ್ತು.
ಘಟನೆಗೆ ಕಾರಣ ತಿಳಿದು ಬಂದಿಲ್ಲ.