
oplus_0
ಕಳಸ ಲೈವ್ ವರದಿ
ಕಳಸ ತಾಲ್ಲೂಕು ದಾಸ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಪಿ.ವಿ. ಕೃಷ್ಣಮೂರ್ತಿ ಸೇವಾದೀಕ್ಷೆಯನ್ನು ಭಾನುವಾರ ಸ್ವೀಕರಿಸಿದರು.
ಕಳಸದ ರುದ್ರಪಾದ ರಾಮ ದೇವಸ್ಥಾನದಲ್ಲಿ ನಡೆದ ಸೇವಾದೀಕ್ಷಾ ಕಾರ್ಯಕ್ರಮದಲ್ಲಿ ದಾಸ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಹಿರೇನಲ್ಲೂರು ಶ್ರೀನಿವಾಸ ಪ್ರತಿಜ್ಞಾ ವಿಧಿ ಬೋಧಿಸಿದರು.
ಇದೇ ಸಂದರ್ಭದಲ್ಲಿ ಗೌರವಾಧ್ಯಕ್ಷರಾಗಿ ಅ.ರಾ. ರಾಧಕೃಷ್ಣ, ಉಪಾಧ್ಯಕ್ಷರಾಗಿ ಲೀಲಾ ಶ್ರೀಕಾಂತ್, ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ ತಲಗೋಡು, ಪ್ರಧಾನ ಸಂಚಾಲಕರಾಗಿ ಅ.ರಾ.ಸತೀಶ್ಚಂದ್ರ, ಅಜಿತ್ ಪ್ರಸಾದ್ ಜೈನ್, ರಜತ್ ಕೆಳಗೂರು, ಜಾನಕಿ ಸುಂದರೇಶ್, ಸಿಂಧು ಪ್ರಭು, ಸಲಹಾ ಸಮಿತಿ ಪಾಂಡುರಂಗ, ರಾಧಿಕಾ ಮನೋಹರ ಪ್ರಭು, ಕಾರ್ಯಕಾರಿ ಸಮಿತಿ ಸದಸ್ಯರಾಗಿ ನಿತ್ಯಾನಂದ ಶೆಣೈ, ಕೆ.ಜೆ.ಗಿರೀಶ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೃಷ್ಣವೇಣಿ ಕೆ ಮೂರ್ತಿ, ಶುಭಾ ಗಿರೀಶ್, ಪ್ರಿಯಾ ಗುರುಪ್ರಸಾದ್, ಕಲ್ಪನಾ ಅಜಿತ್ ಪ್ರಸಾದ್, ನಿಖಿತಾ ಸಂತೋಷ್ ಇತರರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಹಿರೇನಲ್ಲೂರು ಶ್ರೀನಿವಾಸ ಮಾತನಾಡಿ ದಾಸ ಸಾಹಿತ್ಯವನ್ನು ಪರಿಚಯಿಸಲು ಸಾಕಷ್ಟು ಸಂಘ ಸಂಸ್ಥೆಗಳು ಇವೆ.ಅವೆಲ್ಲ ಎಲ್ಲೋ ಒಂದು ಕಡೆ ಒಂದು ಚೌಕಟ್ಟಿನಲ್ಲಿ ಕೆಲಸಮಾಡುತ್ತಿವೆ. ಪ್ರತಿಯೊಂದು ಮನೆಯ ವ್ಯಕ್ತಿಯ ದಾಸ ಸಾಹಿತ್ಯ ತಲುಪಬೇಕು ಎನ್ನುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಡಿಯಲ್ಲಿ ಅದರ ಒಂದು ಅಂಗ ಸಂಸ್ಥೆಯಾಗಿ ದಾಸ ಸಾಹಿತ್ಯ ಪರಿಷತ್ತನ್ನು ರಚನೆ ಮಾಡಿ ಕೆಲಸ ಮಾಡುತ್ತಿದೆ.ಆ ನಿಟ್ಟಿನಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ದಾಸ ಸಾಹಿತ್ಯ ಪ್ರಥಮವಾಗಿ ಹುಟ್ಟಿಕೊಂಡಿದ್ದು ಇದು ಪ್ರತಿಯೊಂದು ತಾಲ್ಲೂಕು, ಹೋಬಳಿ, ಗ್ರಾಮ ಗ್ರಾಮ ಗ್ರಾಮಗಳಲ್ಲಿ ತನ್ನ ಕಾರ್ಯಚಟುವಟಿಕೆಯನ್ನು ನಡೆಸಿ ಪ್ರತಿಯೊಂದು ಮನೆ ಮನೆಗೂ ದಾಸ ಸಾಹಿತ್ಯವನ್ನು ಪರಿಚಯಿಸಲಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಹರಿದಾಸ ಪುಂಡರೀಕ ಭಾಗವತರ್ ಉದ್ಘಾಟಿಸಿ ಮಾತನಾಡಿ, ಹರಿದಾಸರು ಕರ್ನಾಟಕ ಸಂಗೀತಕ್ಕೆ ಶ್ರೀಮಂತ ಕೊಡುಗೆ ನೀಡುವ ಮೂಲಕ ಕರ್ನಾಟಕದ ಧಾರ್ಮಿಕ ಮತ್ತು ಸಾಂಸ್ಕøತಿಕ ಜೀವನದಲ್ಲಿ ಅಳಿಸಲಾಗದ ಛಾಪನ್ನು ಮೂಡಿಸಿದ ಕೀರ್ತಿ ದಾಸರಿಗೆ ಸಲ್ಲುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದಾಸ ಸಾಹಿತ್ಯ ಪರಿಷತ್ತು ಜಿಲ್ಲಾ ಸಂಚಾಲಕರಾದ ಮಮ್ತಾಜ್ ಬೇಗಂ, ಕಳಸ ತಾಲ್ಲೂಕು ಕ.ಸಾ.ಪ ಅಧ್ಯಕ್ಷ ಅ.ರಾ.ಸತೀಶ್ಚಂದ್ರ ಇತರರು ಇದ್ದರು.