
ಎಸ್.ಎಂ. ಮೆಲೋಡಿಸ್ ಕಳಸ ಮತ್ತು ವಾಯ್ಸ್ ಆಫ್ ಬಂಗಾಡಿ ಇವರ ನೇತ್ರತ್ವದಲ್ಲಿ ನಡೆದ ವಾಯ್ಸ್ ಆಫ್ ಕಳಸ ಕರೋಕೆ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಶ್ರೇಯಾ ಮಂಗಳೂರು, ದ್ವಿತೀಯ ಬಹುಮಾನವನ್ನು ದೀಪಕ್ ಕಳಸ, ತೃತೀಯ ಬಹುಮಾನವನ್ನು ಸ್ಮಯ್ಲಿ ಸದಾ ಮೂಡಿಗೆರೆ ಪಡೆದುಕೊಂಡರು.
ಕಳಸದ ವಿಶ್ವಕರ್ಮ ಬ್ರಾಹ್ಮಣ ಸಮುದಾಯದಲ್ಲಿ ನಡೆದ ಈ ಸ್ಪರ್ಧೆಯಲ್ಲಿ 30 ಗಾಯಕರು ಆಗಮಿಸಿದ್ದರು.
ಈಗಾಗಲೇ ಹಲವಾರು ಆಲ್ಬಂ ಗೀತೆಗಳನ್ನು, ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮಗಳಲ್ಲಿ ತನ್ನ ಸಂಗೀತದ ಕಂಪನ್ನು ಪಸರಿಸಿ ಮನೆ ಮಾತಾಗಿರುವ ದೀಪಕ್ ಕಳಸ ತನ್ನ ಗೀತೆಗಳ ಮೂಲಕ ಗಮನ ಸೆಳೆದರು.ಅಂತಿಮವಾಗಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಗಿಟ್ಟಿಸಿಕೊಂಡರು.ವಿಜೇತರಿಗೆ ನಗದಿನೊಂದಿಗೆ ಆಕರ್ಷಕ ಟ್ರೋಫಿಯನ್ನು ನೀಡಲಾಯಿತು.
ಕಾರ್ಯಕ್ರಮವನ್ನು ಅನ್ನಪೂರ್ಣೇಶ್ವರಿ ಮೋಟರ್ಸ್ ಮಾಲಕರಾದ ಕೆ.ಕೆ. ಬಾಲಕೃಷ್ಣ ಭಟ್ ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಳಸ ಗ್ರಾ.ಪಂ. ಅಧ್ಯಕ್ಷೆ ಸುನೀತ ಕುಮಾರಿ,ಪ್ರಗತಿಪರ ಕೃಷಿಕ ಬಂಗಾಡಿ ಅಬ್ದುಲ್ ಸತ್ತಾರ್ ಸಾಹೇಬ್, ಪುಷೊಗಿರಿ ಸಾಂಸ್ಕøತಿಕ ಪ್ರತಿಷ್ಠಾನ ಸಂಸ್ಥಾಪಕ ಮೋಹನ್ ರಾಜಣ್ಣ, ಉದ್ಯಮಿ ಅರುಣ್ ತಾವ್ರೋ, ಡಾ.ರಾಜ್ ಕನ್ನಡ ಸಂಘದ ಅಧ್ಯಕ್ಷ ಕನ್ನಡ ರಾಜು, ಅವಿನ್ ಟಿವಿ ಸ್ಥಾನಿಕ ಸಂಪಾದಕ ಗಣೇಶ್ ಮಗ್ಗಲಮಕ್ಕಿ, ಮೂಡಿಗೆರೆ ಚಂದು ಒಡೆಯರ್, ಗಾಯಕ ಮಂಜುನಾಥ್ ಬಕ್ಕಿ, ಗೋಪಾಲ ಆಚಾರ್ಯ ಇತರರು ಇದ್ದರು