ಕಳಸ ಲೈವ್ ವರದಿ
ಕಾವೇರಿ ವಿವಾದದ ಹಿನ್ನಲೆಯಲ್ಲಿ ರಾಜ್ಯವ್ಯಾಪಿ ಇದೇ ತಿಂಗಳ 29ರ ಶುಕ್ರವಾರದಂದು ಬಂದ್ ಮಾಡಲು ಕನ್ನಡಪರ ಸಂಘಟನೆಗಳು ನಿರ್ಧರಿಸಿದ ಹಿನ್ನಲೆಯಲ್ಲಿ ಕಳಸ ಬಂದ್ಗೆ ಡಾ|| ರಾಜ್ ಕನ್ನಡ ಸಂಘ ಮತ್ತು ಕರವೇ(ಪ್ರವೀಣ ಶೆಟ್ಟಿ ಬಣ)ಮನವಿ ಮಾಡಿದೆ.
ಡಾ|| ರಾಜ್ ಕನ್ನಡ ಸಂಘ ಮತ್ತು ಕರವೇ(ಪ್ರವೀಣ ಶೆಟ್ಟಿ ಬಣ)ಮತ್ತು ರೈತ ಸಂಘದ ಸಹಯೋಗದಲ್ಲಿ ಕರ್ನಾಟಕ ಬಂದ್ ಸಮಯದಲ್ಲಿ ಪ್ರತಿಭಟನೆ, ಮೆರವಣಿಗೆ, ರಸ್ತೆ ತಡೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಕಳಸ ಭಾಗದ ಅಂಗಡಿ, ಹೊಟೇಲ್, ಪೆಟ್ರೋಲ್ ಬಂಕ್ ಮಾಲಿಕರು, ಖಾಸಾಗಿ ಬಸ್ ಮಾಲೀಕರು, ಶಾಲಾ-ಕಾಲೇಜು ವಿದ್ಯಾಸಂಸ್ಥೆಗಳು, ಬಾರ್& ರೆಸ್ಟೋರೆಂಟ್ ಮಾಲಿಕರು, ಗ್ಯಾರೆಜ್ ಮುಂತಾದ ಎಲ್ಲಾ ಉದ್ದಿಮೆಗಳು ಬಂದ್ ಮಾಡಿ ನಮ್ಮ ನಾಡಿನ ನೆಲ, ಜಲದ ಉಳಿವಿಗಾಗಿ ಸಹಕರಿಸಬೇಕು ಎಂದು ಡಾ|| ರಾಜ್ ಕನ್ನಡ ಸಂಘದ ಅಧ್ಯಕ್ಷ ಕನ್ನಡ ರಾಜು ಮತ್ತು ಕರವೇ(ಪ್ರವೀಣ ಶೆಟ್ಟಿ ಬಣ)ದ ಅಧ್ಯಕ್ಷ ಪೂರ್ಣೇಶ್ ಮನವಿ ಮಾಡಿಕೊಂಡಿದ್ದಾರೆ.
Related Stories
July 26, 2024