
ಕಳಸ ಲೈವ್ ವರದಿ
ಇಲ್ಲಿಯ ಇತಿಹಾಸ ಪ್ರಸಿದ್ದ ಹಳುವಳ್ಳಿ ಶ್ರೀ ಮಹಾಗಣೇಶ್ವರ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿಯವರಿಗೆ ಡಿ 15 ರಿಂದ ಡಿ 20ರ ವರೆಗೆ ಜೀರ್ಣ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಮಹಾರಥೋತ್ಸವ ನಡೆಯಲಿದೆ.
ಶುಕ್ರವಾರ ಬೆಳಿಗ್ಗೆ ದೇವತಾ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡು ಡಿ 16 ಶುಕ್ರವಾರದಂದು ಬೆಳಿಗ್ಗೆ ಶಾಂತಿ ಪ್ರಾಯಶ್ಚಿತ್ತ ಹೋಮ, ಕಲಶಾಭಿಷೇಕ, ಸಂಜೆ ಮಂಡಲ ರಚನೆ, ಪರಿಕಲಶ ಸಹಿತ ಬ್ರಹ್ಮಕಲಶ ಸ್ಥಾಪನೆ, ಆಧಿವಾಸ ಹೋಮ, ಜೀರ್ಣ ಅಷ್ಟಬಂಧ ಅಂಗವಾಗಿ ಶಕ್ತಿಹೋಮ ನಡೆಯಲಿದೆ.
ಡಿ 17 ಭಾನುವಾರದಂದು ಬೆಳಿಗ್ಗೆ ಜೀರ್ಣ ಅಷ್ಟಬಂಧ ಸಂಯೋಜನೆ, ಹೊರನಾಡು ಕ್ಷೇತ್ರದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಉಪಸ್ಥಿತಿಯಲ್ಲಿ ಕುಂಭಾಭಿಷೇಕ ಮಹಾಪೂಜೆ.
ಡಿ 18 ಸೋಮವಾರ ಬೆಳಿಗ್ಗೆ ದೇವರಿಗೆ ವಿಶೇಷ ಪೂಜೆ, ರಥೋತ್ಸವ ಹೋಮಾದಿಗಳ ನಂತರ ಮಧ್ಯಾಹ್ನ ಶ್ರೀ ಮನ್ ಮಹಾರಥೋತ್ಸವ.ರಾತ್ರಿ ರಂಗ ಪೂಜೆ ನಡೆಯಲಿದೆ.
ಡಿ 19 ಬೆಳಿಗ್ಗೆ ತುಲಾರೋಪಣ, ಕುಂಕುಮೋತ್ಸವ, ಅವಭೃತ ಸ್ನಾನ ರಾತ್ರಿ ರಂಗ ಪೂಜೆ ಡಿ 20ರಂದು ನಡೆಯುವ ಸಂಪ್ರೋಕ್ಷಣೆಯೊಂದಿಗೆ ಆರು ದಿನಗಳ ಕಾಲ ನಡೆಯುವ ಜೀರ್ಣ ಅಷ್ಟಬಂಧ, ಬ್ರಹ್ಮಕಲಶೋತ್ಸವ ಮತ್ತು ಮಹಾರಥೋತ್ಸವದ ಧಾರ್ಮಿಕ ಕಾರ್ಯಕ್ರಮಗಳಿಗೆ ತೆರೆಬೀಳಲಿದೆ.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಡಿ 18ರಂದು ಶ್ರೀ ಸುಬ್ರಹ್ಮಣ್ಯೇಶ್ವರ ಯಕ್ಷಗಾನ ಮಂಡಳಿ ಹಳುವಳ್ಳಿ ಇವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ.



