![](https://www.kalasalive.com/wp-content/uploads/2024/05/Untitled-1-1.jpg)
ಕಳಸ ಲೈವ್ ವರದಿ
ಕಳಸ ತಾಲೂಕಿನ ತೋಟದೂರು ಗ್ರಾಮ ವ್ಯಾಪ್ತಿಯ ಕಗ್ಗನಾಳದ ಪ್ರಯಾಣಿಕರ ತಂಗುದಾಣದ ಬಳಿ ಎರಡು ಜಾನುವಾರುಗಳು ಕಟುಕರಿಗೆ ಬಲಿಯಾಗಿವೆ.
ಗುರುವಾರ ರಾತ್ರಿ ಘಟನೆ ನಡೆದಿದ್ದು ಕಟುಕರು ಎರಡು ಜಾನುವಾರುಗಳನ್ನು ಕೊಂದು ಮಾಂಸ ಮಾಡಿ ಅದರ ಉಳಿಕೆ ತ್ಯಾಜ್ಯಗಳನ್ನು ರಸ್ತೆ ಬದಿಯಲ್ಲಿ ಎಸೆದು ಹೋಗಿದ್ದಾರೆ.
ಈ ಬಗ್ಗೆ ಕಳಸ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಜಾನುವಾರುಗಳ ತ್ಯಾಜ್ಯವನ್ನು ತೆಗೆಯುವ ಕೆಲಸ ಮಾಡಿದ್ದಾರೆ.
ಪ್ರಕರಣ ಕಳಸ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.