
ಕಳಸ ಲೈವ್ ವರದಿ
ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ತಾಲ್ಲೂಕು ಘಟಕ ಶೃಂಗೇರಿ ಇವರ ಸಂಯುಕ್ತ ಆಶ್ರಯದಲ್ಲಿ ಪೆ 19ರಂದು ಚಿಕ್ಕಮಗಳೂರು ಜಿಲ್ಲಾ ಮಟ್ಟದ ಪ್ರಥಮ ವರ್ಷದ ಜಾನಪದ ಸಮ್ಮೇಳನ ನಡೆಯಲಿದೆ ಎಂದು ಕಳಸ ಕಜಾಪ ಘಟಕದ ಉಪಾಧ್ಯಕ್ಷ ವಿನಾಯಕ ತಿಳಿಸಿದ್ದಾರೆ.
ಶೃಂಗೇರಿಯ ಸರ್ಕಾರಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ ಮೆಣಸೆಯಲ್ಲಿ ಸಮ್ಮೇಳನ ನಡೆಯಲಿದ್ದು, ಸಮ್ಮೇಳನದ ಸಮ್ಮೇಳನಾಧ್ಯಕ್ಷ ಸುರೇಂದ್ರ ಯಡದಾಳ್ ಇವರ ಮೆರವಣಿಗೆ ನಡೆಯಲಿದೆ.ಉದ್ಘಾಟನಾ ಸಮಾರಂಭ, ಜಾನಪದ ಗೋಷ್ಠಿ, ಜಿಲ್ಲಾ ಮಟ್ಟದ ಜಾನಪದ ಕಲಾ ಪ್ರದರ್ಶನ,ಜಾನಪದ ಬಹಿರಂಗ ಅಧಿವೇಶನ, ಸಮಾರೋಪ ಸಮಾರಂಭ, ಜಾನಪದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.
ಕಜಾಪ ರಾಜ್ಯಾಧ್ಯಕ್ಷ ಡಾ.ಜಾನಪದ ಎಸ್ ಬಾಲಾಜಿ, ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ, ಎನ್.ಎಸ್.ನಯನ, ಓಣಿತೋಟ ರತ್ನಾಕರ, ಸುಜಿತ್ ಕುಮಾರ್, ಉಮೇಶ್ ಹೆಚ್.ಜಿ, ಅನಿಲ್ ಕುಮಾರ್, ಎಂ.ಎಸ್.ವಿಶಾಲಕ್ಷಮ್ಮ, ಸೂರಿಶ್ರೀನಿವಾಸ್,ಸಂಧ್ಯಾ ಮರಿಯಪ್ಪ ನಾಯ್ಕ್, ಟಿ.ಟಿ.ಕಳಸಪ್ಪ ಗೌಡ, ರವೀಂದ್ರ ಕುಕ್ಕುಡಿಗೆ, ಆಶೀಶ್ ದೇವಾಡಿಗ, ಜೀನೇಶ್ ಇರ್ವತ್ತೂರು, ಜ್ಯೋತಿ ಮಂಜುನಾಥ್, ಉದಯ ಮೆಣಸೆ, ಜಯಂತಿ ಜೈನ್ ಸೇರಿದಂತೆ ಇನ್ನು ಹಲವಾರು ಗಣ್ಯರು ಜಾನಪದ ಪ್ರೇಮಿಗಳು ಈ ಜಾನಪದ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.