
ಕಳಸ ಲೈವ್ ವರದಿ
ಹಿರೇಬೈಲಿನ ಇಡಕಿಣಿ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ಪಿ ಗಿರೀಶ್ ಹೆಮ್ಮಕ್ಕಿ ಉಪಾಧ್ಯಕ್ಷರಾಗಿ ಎಂ.ಸಿ ಸಂತೋಷ್ ಆಯ್ಕೆಯಾಗಿದ್ದಾರೆ.
ಇಡಕಣಿ ಸಹಕಾರ ಸಂಘದ 12 ನಿರ್ದೇಶಕರಿಗಾಗಿ ಕಳೆದ ಒಂದು ತಿಂಗಳ ಹಿಂದೆ ಚುನಾವಣೆ ನಡೆದಿತ್ತು. ಮತದಾನದ ನಂತರ ಕೆಲ ತಾಂತ್ರಿಕ ಕಾರಣಗಳಿಗೆ ಹೈಕೋರ್ಟ್ ಫಲಿತಾಂಶಕ್ಕೆ ತಡೆ ನೀಡಿತ್ತು. ಫೆ 16ಕ್ಕೆ ಚುನಾವಣಾ ಫಲಿತಾಂಶ ಘೋಷಣೆ ಮಾಡಲಾಗಿತ್ತು.
ಚುನಾವಣೆಯಲ್ಲಿ ಗಿರೀಶ್ ಹೆಮ್ಮಕ್ಕಿ, ಹಿರೇಬೈಲು ಗೋವರ್ಧನ್, ಬರಗಲ್ ಭೋಜರಾಜ್, ಎಡೂರು ವಿದ್ಯಾಸಾಗರ್, ಎಂ.ಸಿ.ಸಂತೋಷ್ ಮರಸಣಿಗೆ, ನಾಗೇಶ್ ಇಡಕಿಣಿ. ಹರೀಶ್ ಹಿರೇಬೈಲ್, ರಾಜೇಶ್ ಮರಸಣಿಗೆ, ಸಂಗೀತ ಹೆಮ್ಮಕ್ಕಿ, ವೃಂದಾವತಿ ಹೆಮ್ಮಕ್ಕಿ, ವೈಶಾಲಿ ಹಾಗೂ ಮರಸಣಿಗೆಯ ವೆರೋನಿಕಾ ಕ್ರಾಸ್ತಾ ಚುನಾಯಿತರಾಗಿದ್ದರು.
ಫೆ 28ರಂದು ಗಿರೀಶ್ ಹೆಮ್ಮಕ್ಕಿಯವರನ್ನು ಅಧ್ಯಕ್ಷರನ್ನಾಗಿ ಹಾಗೂ ಎಂ.ಸಿ. ಸಂತೋಷ್ ಅವರನ್ನು ಉಪಾಧ್ಯಕ್ಷರನ್ನಾಗಿ ಅವಿರೋದ ಆಯ್ಕೆ ಮಾಡಲಾಯಿತು.