
ಕಳಸ ಲೈವ್ ವರದಿ
ವರದಿ ಕೃಪೆ:ರಜಿತ್ ಕೆಳಗೂರು
ದೀಪಾವಳಿ ಹಬ್ಬದ ಉತ್ಸವದ ಮುನ್ನೋಟ ಇಂದು ಮುಂಡುಗ ಹಾಕುವ ಸಂಪ್ರದಾಯದಿAದ ಪ್ರಾರಂಭವಾಗುತ್ತದೆ. ಇದು ನಮ್ಮ ತಾಯ್ನಾಡಿನ ಪ್ರಕೃತಿ ಮತ್ತು ಪಾರಂಪರ್ಯವನ್ನು ಗೌರವಿಸುವ ಹಳೆಯ ಸಂಪ್ರದಾಯಗಳಲ್ಲಿ ಒಂದಾಗಿದೆ. ಈ ದಿನದ ಬೆಳಿಗ್ಗೆ ಮನೆಯವರು ತಾವು ಬಲ್ಲ ಹಳ್ಳಿಯ ಸುತ್ತಮುತ್ತ ಸಿಗುವ ಮುಂಡುಗದ ಗಿಡ, ಲಕ್ಕಿ ಸೊಪ್ಪು, ಉತ್ರಾಣಿ ಕಡ್ಡಿ, ಚೆಂಡು ಹೂವಿನ ಗಿಡ ಹಾಗೂ ಬತ್ತದ ತೆನೆಗಳನ್ನು ತಂದು ಪೂಜೆಗೆ ಸಜ್ಜಾಗುತ್ತಾರೆ.
ಮನೆಯ ತುಳಸಿ ಕಟ್ಟೆ ಅಥವಾ ಜಗುಲಿಯಲ್ಲಿ ಈ ಸಸ್ಯಗಳನ್ನು ಅಲಂಕರಿಸಿ ಪೂಜೆ ಮಾಡುವುದರಿಂದ ದಿನದ ಶ್ರೇಷ್ಠಾರಂಭವಾಗುತ್ತದೆ. ಕೃಷಿ ಮನೆಗಳಲ್ಲಿ ಬತ್ತದ ತೆನೆಗೆ ವಿಶೇಷ ಮಹತ್ವ ನೀಡಲಾಗುತ್ತದೆ — ಅದು ಹೊಸ ಬೆಳೆಯ ಸಂಕೇತವೆAದು ನಂಬಲಾಗುತ್ತದೆ. ಪೂಜೆಯ ಬಳಿಕ ಚಿನೇಕಾಯಿ ಕಡುಬು ಹಾಗೂ ಕಾಯಿಹಾಲು ತಯಾರಿಸುವುದು ಹಬ್ಬದ ಸಿಹಿಯ ಆಚರಣೆಯಾಗುತ್ತದೆ.
ಪೂಜೆ ಮುಗಿದ ನಂತರ ಪ್ರತಿಯೊಂದು ಸಸ್ಯದ ಒಂದೊAದು ಎಲೆ ಅಥವಾ ಚಿಗುರು ಸೇರಿಸಿ ಕಟ್ಟಿ, ಸಣ್ಣ ಮುಂಡುಗದ ಕಟ್ಟುಗಳನ್ನು ತಯಾರಿಸಲಾಗುತ್ತದೆ. ಈ ಕಟ್ಟುಗಳನ್ನು ಮನೆಯ ಮುಂಭಾಗ, ಹಿತ್ತಲ ಬಾಗಿಲು, ಗದ್ದೆ, ಕೊಟ್ಟಿಗೆ, ತೋಟ ಹಾಗೂ ಗೊಬ್ಬರದ ಗುಂಡಿಗಳಲ್ಲಿ ಇಡಲಾಗುತ್ತದೆ. ಇದರ ಮೂಲಕ ಮನೆಗೆ, ಪಶುಗಳಿಗೆ, ಬೆಳೆಗೆ ಮತ್ತು ಭೂಮಾತೆಗೆ ಆಶೀರ್ವಾದ ಕೋರುವ ಸಂಕೇತ ಅಡಗಿದೆ.
ಗ್ರಾಮಾಂತರಗಳಲ್ಲಿ ಈ ಪದ್ಧತಿಗೆ ಧಾರ್ಮಿಕ ಅರ್ಥವೂ ಸೇರಿದೆ. ಮನೆತನದ ರಕ್ಷಕ ದೇವತೆಗಳಾದ ನಾಗದೇವತೆ, ಚೌಡಮ್ಮ, ಪಂಜರವಳ್ಳಿ, ಬೂತಪ್ಪ ಮುಂತಾದವರಿಗೆ ವರ್ಷಕ್ಕೊಮ್ಮೆ ಮುಂಡುಗದ ಪೂಜೆ ಮಾಡಲಾಗುತ್ತದೆ. ತೋಟದೊಳಗೆ ಇಂತಹ ದೇವತೆಗಳಿಗೆ ನಿಗದಿಪಡಿಸಿದ ಜಾಗವನ್ನು “ಗದಿಗೆ” ಎಂದು ಕರೆಯಲಾಗುತ್ತದೆ — ಉದಾಹರಣೆಗೆ ಚೌಡಮ್ಮನ ಗದಿಗೆ, ಪಂಜರವಳ್ಳಿ ಗದಿಗೆ ಇತ್ಯಾದಿ. ಈ ಗದಿಗೆಗಳಿಗೂ ಮುಂಡುಗ ಕಟ್ಟು ಇಡಲಾಗುವುದು.
ದೀಪಾವಳಿಯ ಮೊದಲ ದಿನದ ಈ ಆಚರಣೆ ಕೇವಲ ಪೂಜೆ ಅಲ್ಲ — ಅದು ನಮ್ಮ ಸಸ್ಯ, ಮಣ್ಣು, ಪಶು, ದೇವತೆ, ಮನೆ ಮತ್ತು ಕುಟುಂಬದ ಒಕ್ಕೂಟದ ಪ್ರತೀಕ. ಈ ಪುರಾತನ ಸಂಪ್ರದಾಯ ಪೀಳಿಗೆಯಿಂದ ಪೀಳಿಗೆಗೆ ಸಾಗುತ್ತಾ, ಪ್ರಕೃತಿಯೊಂದಿಗೆ ಮಾನವನ ಆತ್ಮೀಯ ಬಾಂಧವ್ಯವನ್ನು ನೆನಪಿಸುತ್ತಿದೆ.