![](https://www.kalasalive.com/wp-content/uploads/2024/03/feb30f59-98cb-45f8-a374-3afcbdfeab5b-1024x473.jpg)
ಕಳಸ ಲೈವ್ ವರದಿ
ಕಳಸದ ಸಾಹಿತಿ, ಬರಹಗಾರ ವೈ ಪ್ರೇಮ್ ಕುಮಾರ್ ಅವರ ಮಾಡಲ ಮೌನ ಪುಸ್ತಕ ಶನಿವಾರ ಬಿಡುಗಡೆಗೊಳಿಸಲಾಯಿತು.
ಕಳಸದ ಸಾಯಿ ಮಂದಿರದಲ್ಲಿ ನಡೆದ ಕನ್ನಡ ಜಾನಪದ ಪರಿಷತ್ ಕಳಸ ಘಟಕದ ಪದಗ್ರಹಣ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಗೊಳಿಸಲಾಯಿತು.
ಕೆಲವೇ ತಿಂಗಳ ಹಿಂದೆ ಪ್ರೇಮ್ ಕುಮಾರ್ ಅವರ ಹೇರೆತ್ತು ಕಾದಂಬರಿ ಬಿಡುಗಡೆಗೊಂಡಿತ್ತು.ಇದೀಗ ಎರಡನೇ ಪುಸ್ತಕ ಮೂಡಲ ಮೌನ ಬಿಡುಗಡೆಗೊಂಡಿರುವುದಲ್ಲದೆ ಕಾಡೆಡೆಗೆ, ಕಿರಣ, ಹೊನ್ನಕಿರಣ, ಬೇಂದ್ರೆ ಮಾಸ್ತಾರ್, ಮಾರ್ನಳ್ಳಿ ಅಂಜೆ ಕಛೇರಿ ಪುಸ್ತಕಗಳು ಕೂಡ ಮುದ್ರಣ ಹಂತದಲ್ಲಿದೆ ಎಂದು ಪ್ರೇಮ್ ಕುಮಾರ್ ಮಾಹಿತಿ ನೀಡಿದರು.
ಕನ್ನಡ ಜಾನಪದ ಪರಿಷತ್ತಿನ ರಾಜ್ಯಧ್ಯಕ್ಷರಾದ ಡಾ. ಜಾನಪದ ಎಸ್. ಬಾಲಾಜಿ, ಜಿಲ್ಲಾ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಓಣಿತೋಟ ರತ್ನಾಕರ್, ಕಳಸ ತಾಲ್ಲೂಕು ಘಟಕದ ಅಧ್ಯಕ್ಷ ಅಜಿತ್ ಪ್ರಸಾದ್, ರಂಗಭೂಮಿ ಕಲಾವಿದ ರಾಜಗೋಪಾಲ ಜೋಷಿ, ಜಿಲ್ಲಾ ಉಪಾಧ್ಯಕ್ಷೆ ಸುಜಯ ಸದಾನಂದ, ಕಳಸ ಉಪ ತಹಶೀಲ್ದಾರ್ ಸುಧಾ, ಉಧ್ಯಮಿ ಕೆ.ಕೆ ಬಾಲಕೃಷ್ಣ ಭಟ್,ಪಾಂಡುರಂಗ ಇದ್ದರು.