
ಕಳಸ ಲೈವ್ ವರದಿ
ಕಳಸ ಎಡದಾಳು ಪ್ರತಿಮ ಶೆಟ್ಟಿ ಅವರ ಗದ್ದೆಯಲ್ಲಿ ಗದ್ದೆ ಕೊಯ್ಲು ಮಾಡುವುದರ ಮುಖಾಂತರ ರೈತ ದಿನಾಚರಣೆಯನ್ನು ಕನ್ನಡ ಜಾನಪದ ಪರಿಷತ್ತು ಸದಸ್ಯರು ಆಚರಿಸಿದರು.
ಕಳೆದ ಕೆಲ ದಿನಗಳ ಹಿಂದೆ ಸುರಿದ ಅಕಾಲಿಕ ಧಾರಾಕಾರ ಮಳೆಗೆ ಅಂಜಿದ್ದ ರೈತರು ಆತಂಕದಿಂದ ಭತ್ತದ ಗದ್ದೆಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದರು.ಈಗ ಪುನಃ ಬಿಸಿಲಿನ ವಾತಾವರಣವಿರುವುದರಿಂದ ತಾಲ್ಲೂಕಿನ ಎಲ್ಲೆಡೆ ಭತ್ತದ ಕೊಯ್ಲು ಪ್ರಾರಂಭವಾಗಿದೆ.
ಒಂದೆಡೆ ಭತ್ತದ ಕೊಯ್ಲು ಮಾಡಲು ಕಾರ್ಮಿಕರ ಕೊರತೆ ಇದ್ದು, ಕಟಾವು ಯಂತ್ರಗಳಿಂದ ಭತ್ತದ ಕಟಾವು ಮಾಡುತ್ತಿದ್ದಾರೆ.ಆದರೆ ಕಳಸ ಕನ್ನಡ ಜಾನಪದ ಸದಸ್ಯರು ತಮ್ಮ ಪರಿಷತ್ತಿನ ಸದಸ್ಯೆಯ ಮನೆಯ ಭತ್ತದ ಗದ್ದೆಯಲ್ಲಿ ಗದ್ದೆಗಿಳಿದು ಭತ್ತದ ಕಟಾವು ಮಾಡಿದರು.
ಈ ಸಂದರ್ಭದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡ ಕನ್ನಡ ಜಾನಪದ ಪರಿಷತ್ತು ಅಧ್ಯಕ್ಷ ಅಜಿತ್ ಪ್ರಸಾದ್ ಅದೆಷ್ಟೋ ಜಾನಪದ ಹಾಡುಗಳು ಇಂತಹ ಗದ್ದೆಯಲ್ಲಿ ಹುಟ್ಟಿಕೊಂಡಿವೆ.ಅದು ಇಂದಿನ ಯಾಂತ್ರಿಕೃತ ಬದುಕಿನಲ್ಲಿ ಮರೆಯಾಗುವುದಲ್ಲದೆ ತೋಟಗಾರಿಕಾ ಬೆಳೆ ಹಾಗೂ ಕಾರ್ಮಿಕರ ಸಮಸ್ಯೆ, ಪ್ರಾಣಿಗಳ ಕಾಟ ಇವೆಲ್ಲ ಕಾರಣದಿಂದ ಭತ್ತ ಬೆಳೆಯುವುದು ನಶಿಸಿ ಹೊಗುತ್ತಿದೆ. ಗದ್ದೆಗಿಳಿದು ಭತ್ತ ಕೊಯ್ಲು ಮಾಡುವುದರಲ್ಲಿ ಸಾಕಷ್ಟು ಜಾನಪದ ಸಂಸ್ಕøತಿ ಅಡಗಿವೆ ಇದು ಕೂಡ ಮುಂದಿನ ಪೀಳಿಗೆಗೆ ಉಳಿಯಬೇಕು. ಗದ್ದೆಗಿಳಿದು ಗದ್ದೆಕೊಯ್ಲು ಮಾಡುವುದು ಹೊಸ ಅನುಭವವನ್ನು ನೀಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕನ್ನಡ ಜಾನಪದ ಪರಿಷತ್ತು ಮಹಿಳಾ ಘಟಕದ ಅಧ್ಯಕ್ಷೆ ಸುಜಯ ಸದಾನಂದ, ಸದಸ್ಯರಾದ ವಿನಾಯಕ, ಷ ಭರತ್ರಾಜ್, ಶರೀಫ್, ಕಲ್ಪನಾ ಅಜಿತ್, ಪ್ರೇಮ್ ಕುಮಾರ್, ಅಮಿತಾ ವಿನಾಯಕ್, ಆಶಾ ಗುರು ಶೇಟ್ ಇತರರು ಇದ್ದರು.