
ಕಳಸ ಲೈವ್ ವರದಿ
ಮರಾಠಿಗರ ದೌರ್ಜನ್ಯ ಖಂಡಿಸಿ ಕರ್ನಾಟಕ ಬಂದ್ ಬೆಂಬಲಿಸಿ ಕಳಸದ ಕನ್ನಡಪರ ಸಂಘಟನೆಗಳು ತಾಲ್ಲೂಕು ಕಛೇರಿಯಲ್ಲಿ ಉಪ ತಹಶೀಲ್ದಾರ್ ಸುದಾ ಅವರಿಗೆ ಮನವಿ ಸಲ್ಲಿಸಿದರು.
ಡಾ|ರಾಜ್ ಕನ್ನಡ ಸಂಘ, ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ), ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕ, ಕನ್ನಡ ಜಾನಪದ ಪರಿಷತ್ತು ಒಟ್ಟಾಗಿ ಸೇರಿ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು.
ಬೆಳಗಾವಿ ಜಿಲ್ಲೆಯಲ್ಲಿ ಮರಾಠಿ ಪುಂಡರ ಹಾವಳಿಯು ವಿಪರೀತವಾಗಿದೆ.ಇದರಿಂದ ಪದೇ ಪದೇ ನಮ್ಮ ಕನ್ನಡ ನಾಡಿನ ನೆಲ-ಜಲ-ಬಾಷೆಗೆ ತೀವ್ರ ವಿರೋಧ ಉಂಟಾಗುತ್ತಿದ್ದು, ಕರ್ನಾಟಕದ ಗಡಿ ಭಾಗವಾದ ಬೆಳಗಾವಿಯಲ್ಲಿ ಕನ್ನಡ ನಾಡಿನ ನೆಲ-ಜಲ-ಬಾಷೆಯನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಸರ್ಕಾರ ಕೂಡಲೇ ಎಚ್ಚೆತ್ತು ಮರಾಠಿಗರ ಪುಂಡತನ ನಿಲ್ಲಿಸುವಂತೆ ಕನ್ನಡಪರ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಡಾ|ರಾಜ್ ಕನ್ನಡ ಸಂಘದ ಅಧ್ಯಕ್ಷ ಕನ್ನಡ ರಾಜು, ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ) ಅಧ್ಯಕ್ಷ ಚೌಡ ನಾಯ್ಕ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಅ.ರಾ.ಸತೀಶ್ಚಂದ್ರ, ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕ ಅಧ್ಯಕ್ಷೆ ಮಮ್ತಾಜ್ ಬೇಗಂ, ಕನ್ನಡ ಜಾನಪದ ಪರಿಷತ್ತು ಅಧ್ಯಕ್ಷ ಅಜಿತ್ ಪ್ರಸಾದ್, ಕರವೇ ಗೌರವಾಧ್ಯಕ್ಷ ಶರೀಫ್, ಹೆ.ಚ್.ಡಿ ಜ್ವಾಲನಯ್ಯ, ಪ್ರೀತಮ್, ಜೋಯಿ ಮಾಡ್ತಾ ಇತರರು ಇದ್ದರು.
ಬಂದ್ ಹಿನ್ನಲೆಯಲ್ಲಿ ಕಳಸದಲ್ಲಿ ಯಾವುದೇ ಪ್ರತಿಕ್ರೀಯೆ ವ್ಯಕ್ತವಾಗಲಿಲ್ಲ.ಬಸ್ಸು, ಟ್ಯಾಕ್ಸಿ, ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳು, ಅಂಗಡಿ ಮುಂಗಟ್ಟುಗಳು ಎಂದಿನಂತೆ ಕಾರ್ಯನಿರ್ವಹಿಸಿದ್ದವು.